Webdunia - Bharat's app for daily news and videos

Install App

ಮಹಾ ಶಿವರಾತ್ರಿ : ಶಿವನನ್ನು ಸಂತ್ರಪ್ತಿಗೊಳಿಸಲು ಏನನ್ನು ಅರ್ಪಿಸಬೇಕು ? ಗೊತ್ತಾ ನಿಮಗೆ

Webdunia
ಗುರುವಾರ, 9 ಫೆಬ್ರವರಿ 2017 (18:40 IST)
* ಮಹಾ ಶಿವರಾತ್ರಿ ದಿನದಂದು ಶಿವನಿಗೆ ಯಾವ ರೀತಿ ಪೂಜೆ ಸಲ್ಲಿಸಿದ್ದರೆ, ಯಾವ ರೀತಿ ಫಲಗಳು ಸಿಗುತ್ತವೆ ಎಂದು ತಿಳಿದುಕೊಳ್ಳೊಣ ಬನ್ನಿ. 
 
ಮಹಾಶಿವರಾತ್ರಿ ಹಿಂದುಗಳ ಪವಿತ್ರ ಹಬ್ಬವಾಗಿದೆ. ಈ ದಿನ ಶಿವ ಪಾರ್ವತಿಯ ಪೂಜೆ ನಡೆಯುತ್ತದೆ , ಈ ಪುಜೆಯಿಂದ ಶಿವನು ಭಕ್ತ ಬೇಡಿದ್ದನ್ನು ಶಿವನು ನೀಡುತ್ತಾನೆ ಎಂದು ನಂಬಲಾಗುತ್ತದೆ. ಈ ದಿನದಂದು ಮನಸ್ಸಿನ ಇಚ್ಛೆಗಳು ಈಡೇರುತ್ತದೆ. 
 
ಭಕ್ತ ತಮ್ಮ ಮನಸಿನ್ನ ಕಾಮನೆಗಳಿಗಾಗಿ ಶಿವನನ್ನು ಪೂಜಿಸುತ್ತಾರೆ. ಈ ರೀತಿ ವಿಶೇಷ ಪೂಜೆ ಮಾಡುವುದರಿಂದ ಮನಸ್ಸಿನ ಬೇಡಿಕೆಗಳೆಲ್ಲವನ್ನು ಶಿವನು ನೀಡುತ್ತಾನೆ . ಶಿವನಿಗೆ ನಾವು ವಿವಿಧ ವಸ್ತುಗಳನ್ನು ಕೂಡ ಅರ್ಪಿಸಬೇಕಾಗುತ್ತದೆ , ಇದರಿಂದ ಶಿವನು ಬೇಗನೇ ಒಲಿಯುತ್ತಾನೆ ಎಂದು ನಂಬಲಾಗುತ್ತದೆ. 
 
* ಮಹಾಶಿವರಾತ್ರಿಯಮದು ಶಿವಲಿಂಗ ಮಂದಿರದಲ್ಲಿ ಶಿವನಿಗೆ ಆಕಳಿನ ಹಸಿ ಹಾಲಿನಿಂದ ಅಭಿಷೇಕ ಮಾಡಿದರೆ ವಿಧ್ಯೆ ಪ್ರಾಪ್ತವಾಗುತ್ತದೆ. 
 
* ಶಿವನಿಗೆ ಕಬ್ಬಿನ ರಸದಿಂದ ಅಭಿಷೇಕ ಮಾಡುವುದರಿಂದ ಧನ ಪ್ರಾಪ್ತವಾಗುತ್ತದೆ. 
 
* ಶಿವನಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡಿದರೆ ಮನಸಿನ್ನ ಎಲ್ಲ ಇಚ್ಛೆಗಳು ಪೂರ್ಣವಾಗುತ್ತವೆ.
 
* ಭಗವಾನ ಶಿವನಿಗೆ ಬಿಲ್ವ ಪತ್ರೆ , ಅಕ್ಷತೆ , ಹಾಲು, ಹಣ್ಣುಗಳು ಮತ್ತು ಹೂಗಳು ಅರ್ಪಿಸಬೇಕು ಇದರಿಂದ ಶಿವನಯ ಒಲಿಯುತ್ತಾನೆ ಎಂದು ನಂಬಲಾಗುತ್ತದೆ.
 
ಮಹಾ ಶಿವರಾತ್ರಿಯಂದು ಶಿವನನ್ನು ಆರಾಧಿಸಿದರೆ ಮನಸ್ಸಿನ ಎಲ್ಲ ಮನೋಕಾಮನೆಗಳು ಪುರ್ತಿಯಾಗುತ್ತವೆ. ಇಂದಿನ ದಿನ ಶಿವನಿಗೆ ಬಿಲ್ವ ಪತ್ರೆ ಮತ್ತು ಹೂವನ್ನು ಅರ್ಪಿಸಬೇಕಾಗುತ್ತದೆ. 
 
ತಟ್ಟೆಯಲ್ಲಿ ಕುಂಕುಮ, ಅರಸಿಣ, ಗುಲಾಲ, ಅಕ್ಷತೆ , ಪವಿತ್ರ ದಾರವನ್ನು ಮತ್ತು ಇದರ ಜೊತೆಗೆ ಅಷ್ಟಗಂಧ ಇಡಬೇಕು. ಶಿವ ಪಂಚಾಕ್ಷರಿ ಮಂತ್ರ ವಾದ ಓಂ ನಮಃ ಶಿವಾಯ ಎನ್ನುವ ಮಂತ್ರ ಪಠಿಸುವುದರ ಮೂಲಕ ಶಿವನಿಗೆ ಪಂಚಾಮೃತದ ಅಭಿಷೇಕ ಮಾಡಬೇಕು. ಕುಂಕುಮ ಮತ್ತು ಇತರ ವಸ್ತುಗಳು ಶಿವನಿಗೆ ಅರ್ಪಿಸಿ . ನಂಬಿಕೆ ಪ್ರಕಾರ ಶಿವನಿಗೆ ನೈವಿಧ್ಯವನ್ನು ಅರ್ಪಿಸಬೇಕು . 
 
ಪೂಜೆಯಲ್ಲಿ ಎಕ್ಕಿಯ ಹೂ , ದತ್ತೂರಿ ಹಣ್ಣು , ಪುಷ್ಫ ಇತ್ಯಾದಿ ಶಿವನಿಗೆ ಅರ್ಪಿಸಿ ಶಿವನಿಗೆ ಪೂಜೆಯನ್ನು ಸಲ್ಲಿಸಿ. ಬೆಳ್ಳಿಗ್ಗೆಯಿಂದ ಉಪವಾಸವಿದ್ದು ಸಂಜೆಯ ಹೊತ್ತಿಗೆ ಶಿವನೀಗೆ ಪೂಜೆಯನ್ನು ಮಾಡಿ ಸಂಜೆಯ ಹೊತ್ತಿಗೆ ಪ್ರಸಾದ ಸ್ವಿಕರಿಸಿ , ರಾತ್ರಿ ಶಿವನ ಹಾಡು ಹಾಡುತ್ತ, ಶಿವಮಹಾ ಪುರಾಣದ ಕಥೆಯನ್ನು ಕೇಳುತ್ತ ಅಥವಾ ಪಠಿಸುತ್ತ ಜಾಗರಣೆ ಮಾಡಿದರೆ ಶಿವನು ಓಲಿಯುತ್ತಾನೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

ಮುಂದಿನ ಸುದ್ದಿ
Show comments