Webdunia - Bharat's app for daily news and videos

Install App

13500ಕ್ಕಿಂತ ಮೇಲೇರಿದ ಸೆನ್ಸೆಕ್ಸ್: ಹೊಸ ಆಶಾವಾದ

ರಾಜೇಶ್ ಪಾಲವೀಯಾ
ಶನಿವಾರ, 19 ಜುಲೈ 2008 (17:06 IST)
ದೃಢವಾಗಿ ಅಂತ್ಯಗೊಳ್ಳುವುದರೊಂದಿಗೆ ಶೇರುಪೇಟೆಯ ಶುಕ್ರವಾರದ ವಹಿವಾಟು ಅತ್ಯಂತ ಪ್ರಭಾವಯುತವಾಗಿದ್ದು, ಬ್ಯಾಂಕಿಂಗ್, ಸ್ಥಿರಾಸ್ತಿ, ತೈಲ, ಬಂಡವಾಳ ಉತ್ಪನ್ನ, ವಿದ್ಯುತ್ ಮತ್ತು ಎಫ್ಎಂಸಿಜಿ ಶೇರುಗಳ ಅಮೋಘ ನಿರ್ವಹಣೆಯಿಂದಾಗಿ, ಹಿಂದಿನ ವಾರ 12,514 ಇದ್ದ ಸೆನ್ಸೆಕ್ಸ್ ಮತ್ತು 3790 ಇದ್ದ ನಿಫ್ಟಿ ಸೂಚ್ಯಂಕಗಳು ಅನುಕ್ರಮವಾಗಿ 1100 ಮತ್ತು 300 ಅಂಕಗಳಷ್ಟು ಏರಿಕೆಗೊಂಡವು.

ಆದರೂ, ಮುಂದುವರಿಯುತ್ತಿರುವ ರಾಜಕೀಯ ಅಸ್ಥಿರತೆಯು ಮಾರುಕಟ್ಟೆಯ ಮುಂದಿನ ವಾರದ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಜುಲೈ8, 2008ರಂದು ಎಡಪಕ್ಷಗಳು ಯುಪಿಎ ಸರಕಾರದಿಂದ ತಮ್ಮ ಬಾಹ್ಯ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಜುಲೈ 21 ಮತ್ತು ಜುಲೈ 22ರಂದು ನಡೆಯಲಿರುವ ಯುಪಿಎ ಸರಕಾರದ ವಿಶ್ವಾಸಮತ ಯಾಚನೆಯ ಮುಂದಾಗಿ ಮಾರುಕಟ್ಟೆಯು ಇನ್ನಷ್ಟು ಚಂಚಲವಾಗುವ ನಿರೀಕ್ಷೆಯಿದೆ.

ದಿನದ ವಹಿವಾಟಿನಲ್ಲಿ ಮುಂಬಯಿ ಮಾರುಕಟ್ಟೆಯ ಸಂವೇದಿ ಸೂಚ್ಯಂಕವು 572 ಅಂಕಗಳೊಂದಿಗೆ ಅತಿ ಹೆಚ್ಚು ಏರಿಕೆ ಕಂಡಿದ್ದು, ನಂತರ 13,635 ಅಂಕಗಳಿಗೆ ವಹಿವಾಟನ್ನು ಅಂತ್ಯಗೊಳಿಸಿತ್ತು. ಈ ಮೂಲಕ ದಿನದ ವಹಿವಾಟಿನಲ್ಲಿ ಒಟ್ಟಾರೆ ಶೇ.3.99ರಷ್ಟು ವರ್ಧನೆಗೊಂಡಿತ್ತು. ಅದೇ ರೀತಿ ನಿಫ್ಟಿಯು ಕೂಡಾ 4100ರ ಗಡಿಯನ್ನು ದಾಟಿ, 163 ಅಂಕ ಏರಿಕೆ ಕಂಡು ಒಂದು ಹಂತದಲ್ಲಿ 4,110 ಕ್ಕೂ ತಲುಪಿತು. ನಂತರ 145 ಅಂಕಗಳ ಹೆಚ್ಚಳದೊಂದಿಗೆ ದಿನದ ವಹಿವಾಟನ್ನು 4092 ಅಂಕಗಳಲ್ಲಿ ಅಂತ್ಯಗೊಳಿಸಿತ್ತು.

ಸೋಮವಾರ ಹೇಗೆ?: ಸುಮಾರು 20-35 ಅಂಕಗಳ ಅಂತರದೊಂದಿಗೆ ನಿಫ್ಟಿಯ ಸೋಮವಾರದ ವಹಿವಾಟು ಧನಾತ್ಮಕವಾಗಿಯೇ ಪ್ರಾರಂಭಗೊಳ್ಳುವ ನಿರೀಕ್ಷೆಯಿದ್ದು, ಪ್ರಾರಂಭಿಕ ವಹಿವಾಟನ್ನು ನಿಫ್ಟಿಯು 4120-4130ರ ಆಸುಪಾಸಿನಲ್ಲಿ ನಡೆಸುವ ಸಾಧ್ಯತೆ ಇದೆ. ಒಂದು ವೇಳೆ ನಿಫ್ಟಿಯು ಪ್ರಾರಂಭಿಕ ವರ್ಧನೆಯನ್ನು ಕಂಡಲ್ಲಿ, ದಿನಪೂರ್ತಿ ನಿಫ್ಟಿಯು ಏರುಮುಖದಲ್ಲೇ ಸಾಗಲಿದೆ. ಇದರೊಂದಿಗೆ, ಖರೀದಿ ಪ್ರಕ್ರಿಯೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ನಿಫ್ಟಿಯು 4225-4240 ಅಂಕಗಳಲ್ಲಿ ವಹಿವಾಟನ್ನು ನಡೆಸುವ ನಿರೀಕ್ಷೆಯಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

Show comments