Webdunia - Bharat's app for daily news and videos

Install App

113 ಅಂಕಗಳ ಏರಿಕೆಯಲ್ಲಿ ವಹಿವಾಟು ಅಂತ್ಯ

ರಾಜೇಶ್ ಪಾಲವೀಯಾ
ಬುಧವಾರ, 6 ಆಗಸ್ಟ್ 2008 (19:24 IST)
ಆಟೋ, ಬಂಡವಾಳ ಉತ್ಪನ್ನ ಮತ್ತು ತಂತ್ರಜ್ಞಾನ ಶೇರುಗಳ ಮೇಲ್ಮುಖ ವಹಿವಾಟಿನ ಫಲವಾಗಿ, ಶೇರುಪೇಟೆಯು ಧನಾತ್ಮಕ ಪ್ರವೃತ್ತಿಯಲ್ಲಿ ತನ್ನ ಬುಧವಾರದ ವಹಿವಾಟನ್ನು ಅಂತ್ಯಗೊಳಿಸಿದೆ.

ಜಾಗತಿಕ ಮಾರುಕಟ್ಟೆಯ ದೃಢತೆಯಿಂದ 15,000 ಗಡಿ ದಾಟಿ ವಹಿವಾಟನ್ನು ಪ್ರಾರಂಭಿಸಿದ್ದ ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು, 113.59 ಅಂಕಗಳ ಏರಿಕೆಯೊಂದಿಗೆ ವಹಿವಾಟನ್ನು ಅಂತ್ಯಗೊಳಿಸಿ, 15074.66 ಅಂಕಗಳಿಗೆ ತಲುಪಿದೆ.

ಅಂತೆಯೇ, ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ನಿಫ್ಟಿಯ ಶೇರು ಸೂಚ್ಯಂಕವು 14.05ರಷ್ಟು ಏರಿಕೆಗೊಂಡಿದ್ದು, 4516.90 ಅಂಕಗಳಿಗೆ ತಲುಪಿದೆ. ಈ ದಿನದ ವಹಿವಾಟಿನಲ್ಲಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಬಾರ್ಟಿ ಏರ್‌ಟೆಲ್, ಎಸಿಸಿ, ಟಾಟಾ ಕನ್ಸಲ್ಟನ್ಸಿ ಸರ್ವೀಸ್, ಬಿಎಚ್ಇಎಲ್ ಅತಿ ಹೆಚ್ಚು ಏರಿಕೆ ಕಂಡಿದೆ.

ಅಂತಿಮ ಒಂದು ಗಂಟೆಯ ಅವಧಿಯಲ್ಲಿ ಮಾರುಕಟ್ಟೆ ಚೇತರಿಕೆ ದಾಖಲಿಸಿ ನಿನ್ನೆಗಿಂತ ಸ್ವಲ್ಪ ಏರಿಕೆಯೊಂದಿಗೆ ಅಂತ್ಯ ದಾಖಲಿಸಿತು. ಮುಂಚೂಣಿ ಸೂಚ್ಯಂಕಗಳು ಲಾಭ ದಾಖಲಿಸಿದ್ದು, ಆಟೋ, ಬಂಡವಾಳ ಸರಕು, ತಂತ್ರಜ್ಞಾನ ಮತ್ತು ಎಫ್ಎಂಸಿಜಿ ವಿಭಾಗದಲ್ಲಿ ಶೇರು ಖರೀದಿ ಭರದಿಂದ ಸಾಗಿತ್ತು. ಬ್ಯಾಂಕುಗಳು, ಲೋಹ, ವಿದ್ಯುತ್ ಮತ್ತು ಸ್ಥಿರಾಸ್ತಿ ಶೇರುಗಳಲ್ಲಿ ಮಾರಾಟ ಹೆಚ್ಚಾಗಿತ್ತು. ದಿನದ ಅಂತ್ಯಭಾಗದಲ್ಲಿ ಏರುಪೇರು ಹೆಚ್ಚಾಗಿತ್ತು. ಸ್ಥಳೀಯ ವಹಿವಾಟುದಾರರು ಸಕ್ಕರೆ ಮತ್ತು ಗೊಬ್ಬರ ಸ್ಟಾಕುಗಳಲ್ಲಿ ಹೆಚ್ಚು ಆಸಕ್ತಿ ತೋರಿದ್ದರು. ದಿನದ ಮಧ್ಯಭಾಗದಲ್ಲಿ ದಿಢೀರ್ ಏರಿಕೆ ಗೋಚರಿಸಿತಾದರೂ, ಅಂತಿಮವಾಗಿ ಸ್ವಲ್ಪ ಕುಸಿತ ದಾಖಲಿಸಿತು.

ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಬದಲಾಯಿಸದೇ ಇದ್ದ ಕಾರಣ ಮಂಗಳವಾರ ಅಮೆರಿಕದ ಶೇರು ಬೆಲೆಗಳು ಏರಿಕೆ ಕಂಡಿದ್ದವು. ದಿನದ ಅಧಿಕ 14,422.82 ಮತ್ತು 4615.90ರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಅನುಕ್ರಮವಾಗಿ 350 ಮತ್ತು 100 ಅಂಕ ಇಳಿಕೆ ಕಂಡವು.

ಗುರುವಾರದ ಮಾರುಕಟ್ಟೆಯು ಋಣಾತ್ಮಕವಾಗಿ ತೆರೆದುಕೊಳ್ಳುವ ನಿರೀಕ್ಷೆ ಇದ್ದು, ನಿಫ್ಟಿಯು ಆರಂಭದಲ್ಲಿ 4500ರ ಆಸುಪಾಸಿನಲ್ಲಿರಬಹುದಾಗಿದೆ. ಮಾರಾಟದ ಒತ್ತಡ ಹೆಚ್ಚಾದರೆ ಮತ್ತಷ್ಟು ಕುಸಿಯಬಹುದಾಗಿದೆ. ನಿಫ್ಟಿಯು 4545ಕ್ಕಿಂತ ಹೆಚ್ಚಿನ ಸ್ತರದಲ್ಲಿ ಸ್ಥಿರತೆ ಕಾಯ್ದುಕೊಂಡರೆ, ಮಾರುಕಟ್ಟೆಯಲ್ಲಿ ಮತ್ತಷ್ಟು ಖರೀದಿ ಆಸಕ್ತಿ ಹೆಚ್ಚಿ, ನಿಫ್ಟಿಯು 4570ರಿಂದ 4600ರವರೆಗೂ ಏರಬಹುದಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

Show comments