Webdunia - Bharat's app for daily news and videos

Install App

ಸೆನ್ಸೆಕ್ಸ್: ಸತತ ನಾಲ್ಕನೇ ದಿನವೂ ಕುಸಿತ

ರಾಜೇಶ್ ಪಾಲವೀಯಾ
ಬುಧವಾರ, 16 ಜುಲೈ 2008 (19:12 IST)
ಮಾರಾಟದ ಒತ್ತಡ ಹಾಗೂ ರಾಜಕೀಯ ಅಸ್ಥಿರತೆಯ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆಯ ಷೇರು ಸೂಚ್ಯಂಕ ವಾರದಾದ್ಯಂತ ಇಳಿಮುಖವಾಗಿದ್ದು ಇಂದಿನ ವಹಿವಾಟು 100 ಪಾಯಿಂಟ್‌ಗಳ ಇಳಿಕೆಯೊಂದಿಗೆ ಮುಕ್ತಾಯವಾಗಿದೆ.

ಬಿಎಸ್‌ಇ-30 ಶೇರುಸೂಚ್ಯಂಕ ವಹಿವಾಟಿನ ಆರಂಭದಿಂದ ಅಂತ್ಯದವರೆಗೆ 12,935.25 ರಿಂದ 12,514.02ರವರೆಗೆ ತುಯ್ದಾಡಿದ್ದು, 100.39 ಪಾಯಿಂಟ್‌ಗಳಿಗೆ ಇಳಿಕೆಯಾಗಿ 12,575.80 ಅಂಕಗಳಿಗೆ ತಲುಪಿತು ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಕೂಡಾ 44.40 ಪಾಯಿಂಟ್‌ಗಳಿಗೆ ಇಳಿಕೆಯಾಗಿ 3816.70 ಅಂಕಗಳಿಗೆ ಇಳಿಕೆಯಾಗಿ ವಹಿವಾಟು ಮುಕ್ತಾಯವಾಗಿದೆ.

ಸತತ ನಾಲ್ಕನೇ ದಿನವೂ ಶೇರುಪೇಟೆ ಇಳಿಮುಖದತ್ತ ಸಾಗಿರುವುದು ಶೇರು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ದೇಶದ ಹಣದುಬ್ಬರ ಶೇ. 13 ಅಂಕಗಳ ಗಡಿಯನ್ನು ದಾಟುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಿಆರ್ಆರ್ ಮತ್ತು ರೆಪೋ ದರಗಳನ್ನು ಏರಿಸುವ ನಿರೀಕ್ಷೆಯೂ ಇರುವುದರಿಂದ ಶೇರುದಾರರಲ್ಲಿ ಆತಂಕದ ಮನೋಭಾವ ಕಂಡುಬಂದಿದೆ.

ವಹಿವಾಟು ಆರಂಭವಾಗುತ್ತಿದ್ದಂತೆ ವಹಿವಾಟು ಕುಸಿತಗೊಂಡ ಭಾರತೀಯ ಮಾರುಕಟ್ಟೆಯಂತೆ ಯುರೋಪಿಯನ್ ಮಾರುಕಟ್ಟೆ ಕೂಡಾ ವಹಿವಾಟಿನ ಆರಂಭದಲ್ಲಿ ಕುಸಿತ ಕಂಡುಬಂದಿತು. ಭಾರತೀಯ ಮಾರುಕಟ್ಟೆಗಳಿಗಿಂತ ಮೊದಲು ವಹಿವಾಟು ಆರಂಭಿಸಿದ ಏಷಿಯನ್ ಮಾರುಕಟ್ಟೆಗಳು ಮಿಶ್ರ ಫಲಿತಾಂಶ ಕಂಡಿವೆ.

ಅಮೆರಿಕದ ಆರ್ಥಿಕತೆ ನಿಧಾನವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೆಲ ಭಾವನಾತ್ಮಕ ಅಂಶಗಳು ಶೇರು ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತವೆ ಎಂದು ಫೆಡರಲ್ ಮುಖ್ಯಸ್ಥ ಬೆನ್ ಬರ್ನಾನ್‌ಕೆ ಹೇಳಿದ್ದಾರೆ.

ನಿನ್ನೆ ನ್ಯೂಯಾರ್ಕ್ ಶೇರುಪೇಟೆಯಲ್ಲಿ ಕಚ್ಚಾ ತೈಲಗಳ ಬೆಲೆಗಳಲ್ಲಿ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 138.74 ಡಾಲರ್‌ಗೆ ತಲುಪಿತ್ತು

ಎಡಪಕ್ಷಗಳು ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಂಡಿದ್ದರಿಂದ ಕೇಂದ್ರ ಸರಕಾರ ವಿಶ್ವಾಸಮತ ಪಡೆಯಲು 21ಹಾಗೂ22 ರಂದು ಅಧಿವೇಶನ ಕರೆಯಲಾಗಿದೆ. ದೇಶದಲ್ಲಿ ಉಂಟಾದ ರಾಜಕೀಯ ಅಸ್ಥಿರತೆ ದೇಶದ ಮಾರುಕಟ್ಟೆಯ ಮೇಲೆ ಭಾರಿ ಪ್ರಭಾವವನ್ನು ಬೀರಿದೆ.

ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ, ಎಸ್‌ಬಿಐ, ಟಾಟಾಸ್ಟೀಲ್, ಐಸಿಐಸಿಐ ಬ್ಯಾಂಕ್, ಡಿಎಲ್‌ಎಫ್ ಮತ್ತು ಯುನಿಟೆಕ್ ಶೇರುಗಳು ಇಳಿಕೆಗೆ ಕಾರಣವಾಗಿವೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

Show comments