Webdunia - Bharat's app for daily news and videos

Install App

ಷೇರುಪೇಟೆಗೆ ಹಣದುಬ್ಬರದ ಭೂತ

ರಾಜೇಶ್ ಪಾಲವೀಯಾ
ಶುಕ್ರವಾರ, 11 ಜುಲೈ 2008 (20:26 IST)
ಹಣದುಬ್ಬರ ಹೆಚ್ಚಳ, ಕಚ್ಚಾ ತೈಲ ದರ ಏರಿಕೆ ಹಾಗೂ ಇನ್‌ಫೋಸಿಸ್ ತ್ರೈಮಾಸಿಕ ವರದಿಯಿಂದಾಗಿ ಇಂದಿನ ಷೇರುಪೇಟೆಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಷೇರುಗಳು ವಿದ್ಯುತ್, ತೈಲಗಳ ಷೇರುಗಳ ಮಾರಾಟದಲ್ಲಿ ಭರಾಟೆ ಕಂಡುಬಂದಿತು.

ನೈಜೇರಿಯಾ ಮತ್ತು ಇರಾನ್ ದೇಶಗಳು ತೈಲ ಸರಬರಾಜು ನಿಲ್ಲಿಸುವ ಬೆದರಿಕೆಯ ಮಧ್ಯೆ ಕಚ್ಚಾ ತೈಲ ಶೇ 3.57ರಷ್ಟು ಹೆಚ್ಚಳವಾಗಿ ಪ್ರತಿ ಬ್ಯಾರೆಲ್‌ಗೆ 145.70 ಡಾಲರ್‌ ಏರಿಕೆಯಾಗಿದ್ದು ಮುಂಬರುವ ವಾರದಲ್ಲಿ ಬ್ರೆಜಿಲ್ ತೈಲ ಕಾರ್ಮಿಕರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರಿಂದ ತೈಲ ದರಗಳು ಇನ್ನಷ್ಟು ಹೆಚ್ಚಳವಾಗುವ ಆತಂಕ ಮೂಡಿಸಿದೆ.

ಇಂದು ಸರಕಾರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಏಪ್ರಿಲ್ 2008ರಲ್ಲಿ ಕೈಗಾರಿಕಾ ಉತ್ಪನ್ನಗಳು ಶೇ 6.2ರಷ್ಟು ಏರಿಕೆಯಾಗಬೇಕಿದ್ದು ಕಡಿಮೆ ಉತ್ಪನ್ನವಾಗಿದೆ. ಮೇ ತಿಂಗಳಲ್ಲಿ ಶೇ3.8ರಷ್ಟು ಏರಿಕೆಯಾಗಿದೆ.ಶೇ 7ರಷ್ಟು ಕೈಗಾರಿಕಾ ಉತ್ಪನ್ನಗಳು ಗುರಿಯನ್ನು ತಲುಪಲು ಸಾಧ್ಯವಾಗದಿರುವುದು ಹಣದುಬ್ಬರದ ನಿರಂತರ ಏರಿಕೆ ಕಾರಣವಾಗಿದೆ. ಕಳೆದ ವಾರ ಶೇ11.63ರಷ್ಟಿದ್ದ ಹಣದುಬ್ಬರ ಜೂನ್ 28ರ ವಾರಾಂತ್ಯಕ್ಕೆ ಶೇ 11.89ರಷ್ಟು ಹೆಚ್ಚಳವಾಗಿದೆ.

ರಿಲಯನ್ಸ್ ಇಂಡಿಯಾ, ರಿಲಯನ್ಸ್ ಇನ್‌ಫ್ರಾ , ಎಲ್ ಆಂಡ್ ಟಿ,ಮತ್ತು ಬಿಎಚ್‌ಇಎಲ್ ಷೇರುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸೆನ್ಸೆಕ್ಸ್ 574 ಪಾಯಿಂಟ್‌ಗಳಿಗೆ ಕುಸಿತವಾಗಿದ್ದು ನಿಫ್ಟಿ 147 ಪಾಯಿಂಟ್‌ಗಳಿಗೆ ಕುಸಿತವಾಗಿ ಕ್ರಮವಾಗಿ 13,351 ಮತ್ತು 4014 ಅಂಕಗಳಿಗೆ ತಲುಪಿವೆ.

ಸೋಮವಾರದ ಷೇರುಪೇಟೆಯ ಮಾರುಕಟ್ಟೆಯಲ್ಲಿ ಆರಂಭಿಕ ಹಂತದಲ್ಲಿ ನಿಫ್ಟಿ 4040-4050 ಪಾಯಿಂಟ್‌ಗಳಿಗೆ ತಲುಪುವು ನಿರೀಕ್ಷೆಯಿದೆ. ವಹಿವಾಟಿನಲ್ಲಿ ಅಲ್ಪ ಮಟ್ಟಿಗೆ ಏರಿಕೆ ಕಂಡುಬಂದಲ್ಲಿ ನಿಫ್ಟಿ 4095-4105 ಅಂಕಗಳಿಗೆ ತಲುಪಿದಲ್ಲಿ ಷೇರುಪೇಟೆ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

Show comments