Webdunia - Bharat's app for daily news and videos

Install App

ಏಪ್ರಿಲ್ 14 ರಂದು ಭದ್ರಾಚಲರಾಮನ ಕಲ್ಯಾಣೋತ್ಸವ.. 6 ರಿಂದ ಬ್ರಹ್ಮೋತ್ಸವಗಳು

Webdunia
ಬುಧವಾರ, 13 ಮಾರ್ಚ್ 2019 (13:52 IST)
ಪ್ರಮುಖ ಪುಣ್ಯಕ್ಷೇತ್ರ ಭದ್ರಾಚಲದಲ್ಲಿ ಶ್ರೀಸೀತಾರಾಮಚಂದ್ರಸ್ವಾಮಿಗಳ ಬ್ರಹ್ಮೋತ್ಸವಗಳು ಚೈತ್ರಶುದ್ಧ ಪಾಡ್ಯ ಯುಗಾದಿಯ ದಿನ (ಏಪ್ರಿಲ್ 6) ರಂದು ಪ್ರಾರಂಭವಾಗಿ ಏಪ್ರಿಲ್ 20 ತನಕ ನೆರವೇರುತ್ತದೆ. ಈ ಪುಣ್ಯಕ್ಷೇತ್ರದ ವೇದ ಪಂಡಿತರು, ಅರ್ಚಕರು ಮುಹೂರ್ತವನ್ನು ಖಾಯಂಗೊಳಿಸಿದ್ದಾರೆ.

ಏಪ್ರಿಲ್ 6 ರಿಂದ 20 ತನಕ ಶ್ರೀ ರಾಮನವಮಿ ಬ್ರಹ್ಮೋತ್ಸವನ್ನು ನಡೆಸಲು ನಿರ್ಧರಿಸಿದ್ದಾರೆ. ಏಪ್ರಿಲ್ 14 ನವಮಿ ದಿನದಂದು ಸೀತಾರಾಮರ ಕಲ್ಯಾಣ, 15ನೇ ತಾರೀಖು ಮಹಾ ಪಟ್ಟಾಭಿಷೇಕ ಜರಗುತ್ತದೆ. ಈ ಸೀತಾರಾಮರ ಕಲ್ಯಾಣವನ್ನು ಭಕ್ತರು ಕಣ್ತುಂಬಿಕೊಳ್ಳಲು ಮಿಥಿಲಾ ಪ್ರಾಂಗಣದಲ್ಲಿ ಅಧಿಕಾರಿಗಳು ಏರ್ಪಾಟು ಮಾಡುತ್ತಿದ್ದಾರೆ.
 
ರೂ. 5 ಸಾವಿರ, ರೂ.2 ಸಾವಿರ, ಇತ್ಯಾದಿ ಟಿಕೇಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದೆಂದು ಆಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದೆಡೆ, ಬ್ರಹ್ಮೋತ್ಸವಗಳ ಸಿದ್ಧತೆಗಳಿಗೆ ಸಂಬಂಧಿಸಿದಂತೆ ರೂ. 85 ಲಕ್ಷ ವೆಚ್ಚದಲ್ಲಿ ಬಹಳಷ್ಟು ಕಾರ್ಯಗಳಿಗೆ ಹೇಳಿದ್ದಾರೆ. ಬ್ಯಾರಿಕೇಡ್‌ಗಳು, ಚಪ್ಪರಗಳು, ಕಲ್ಯಾಣೋತ್ಸವ ಸಿದ್ಧತೆಗಳು, ಪ್ರಸಾದ ವಿನಿಯೋಗ, ಗೋದಾವರಿಯಲ್ಲಿ ಸ್ನಾನ ಘಟ್ಟಗಳಲ್ಲಿ ಭದ್ರತೆ, ಪೋಲೀಸು ಬಂದೋಬಸ್ತು, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಇಂತಹ ಹಲವಾರು ಅನುಕೂಲತೆಗಳ ಕಡೆಗೆ ಅಧಿಕಾರಿಗಳು ದೃಷ್ಟಿವಹಿಸಿದ್ದಾರೆ.
 
ಏಪ್ರಿಲ್ 14 ರಂದು ಕಲ್ಯಾಣಕ್ಕಾಗಿ ವೈದಿಕ ಕಮಿಟಿ ಮುಹೂರ್ತ ನಿರ್ಣಯದೊಂದಿಗೆ ಶ್ರೀರಾಮನವಮಿಯನ್ನು ಜ್ಞಾಪಕದಲ್ಲಿಟ್ಟುಕೊಂಡು ಶ್ರೀ ಕಲ್ಯಾಣ ಬ್ರಹ್ಮೋತ್ಸವಗಳ ನಿಗದಿತ ಅವಧಿಯನ್ನು ಕೂಡ ಪ್ರಕಟಿಸಿದೆ. ಏಪ್ರಿಲ್ 6 ರಿಂದ 20 ತನಕ ವಸಂತಪಕ್ಷ ಪ್ರಯುಕ್ತ ಶ್ರೀರಾಮನವಮಿ ಕಲ್ಯಾಮ ಬ್ರಹ್ಮೋತ್ಸವಗಳು ನಡೆಯುತ್ತವೆ. ಏಪ್ರಿಲ್ 6ರಂದು ವಿಕಾರಿ ನಾಮ ಸಂವತ್ಸರ ಯುಗಾದಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಪಂಚಾಂಗ ಶ್ರವಣ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಏಪ್ರಿಲ್ 10 ರಂದು ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣೆ, ಮಂಡಪ ವಾಸ್ತು ಹೋಮ. ಏಪ್ರಿಲ್ 11ರಂದು ಗರುಡ ಅದಿವಾಸ, 12ರಂದು ಅಗ್ನಿ ಮುಖ, ಅಗ್ನಿಪ್ರತಿಷ್ಟ, ಧ್ವಜಾರೋಹಣ, ದೇವತಾವಾಹನ, 13ರಂದು ಎದುರುಗೊಳ್ಳು ಉತ್ಸವ, ಗರುಡ ಸೇವೆ, 14ರಂದು ಶ್ರೀಸೀತಾರಾಮರ ಕಲ್ಯಾಣ, 15 ರಂದು ಮಹಾಪಟ್ಟಾಭಿಷೇಕ, 16ರಂದು ಸದಸ್ಯಂ, 20ರಂದು ಧ್ವಜಾರೋಹಣ ಮತ್ತಿತ್ತರ ಕಾರ್ಯಕ್ರಮಗಳು ನೆರವೇರುತ್ತವೆ.

ಸಂಬಂಧಿಸಿದ ಸುದ್ದಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments