Webdunia - Bharat's app for daily news and videos

Install App

‘ಸೋನಿಯಾ ಗಾಂಧಿ ಹಣವನ್ನು ಸಾಚಾ ಮಾಡುತ್ತಿದ್ದವರೇ ಪಿ. ಚಿದಂಬರಂ’

Webdunia
ಗುರುವಾರ, 18 ಮೇ 2017 (06:33 IST)
ನವದೆಹಲಿ: ಯುಪಿಎ ಅಧಿಕಾರವಧಿಯಲ್ಲಿ ಪಿ.ಚಿದಂಬರಂನಷ್ಟು ಭ್ರಷ್ಟ ಸಚಿವರು ಇನ್ಯಾರೂ ಇರಲಿಲ್ಲ ಎನ್ನುವ ಮೂಲಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 
‘ಯುಪಿಎ ಅಧಿಕಾರವಧಿಯಲ್ಲಿ ಚಿದಂಬರಂನಷ್ಟು ಭ್ರಷ್ಟ ಸಚಿವರು ಬೇರಾರೂ ಇರಲಿಲ್ಲ. ಸೋನಿಯಾ ಗಾಂಧಿಯ ಹಣವನ್ನು ಸಾಚಾ ಮಾಡುತ್ತಿದ್ದವರೇ ಅವರು. ತಮ್ಮ ಪುತ್ರನಿಗಾಗಿ ನಿಯಮವನ್ನೇ ಬದಲಿಸಿದವರು. ಅಂತಹ ಸಚಿವರನ್ನು ಶಿಕ್ಷೆಗೊಳಪಡಿಸಬೇಕು. ಭವಿಷ್ಯದಲ್ಲಿ ಮತ್ತೆ ಯಾರೂ ಇಂತಹ ತಪ್ಪು ಮಾಡಬಾರದು’ ಎಂದು ಸ್ವಾಮಿ ಕಿಡಿಕಾರಿದ್ದಾರೆ.

ಅಲ್ಲದೆ ಹಣಕಾಸು ಇಲಾಖೆಯ ಕೆಲವು ಅಧಿಕಾರಿಗಳು ಇನ್ನೂ ಚಿದಂಬರಂ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕೆಲಸದಿಂದ ಕಿತ್ತೊಗೆಯಬೇಕು ಎಂದು ನಾನು ಆಗ್ರಹಿಸಿದರೂ ಸಚಿವ ಅರುಣ್ ಜೇಟ್ಲಿ ಕಿವಿಗೊಡುತ್ತಿಲ್ಲ ಎಂದಿದ್ದಾರೆ.

ಅಲ್ಲದೆ ಸರ್ಕಾರ ತನ್ನ ಧ್ವನಿ ಹತ್ತಿಕ್ಕಲು ನೋಡುತ್ತಿದೆ ಎಂಬ ಚಿದಂಬರಂ ಆರೋಪವನ್ನು ಪ್ರಶ್ನಿಸಿದ ಸ್ವಾಮಿ, ಅವರಿಗೆ ಯಾವ ಧೈರ್ಯವಿದೆ. ಧೈರ್ಯವಿದ್ದರೆ ಸರ್ಕಾರದ ವಿರುದ್ಧ ಹೂಂಕರಿಸುವುದನ್ನು ಬಿಟ್ಟು ತಾನು ನಿರಪರಾಧಿ ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ದೇಶದ ಸೈನಿಕರಿಗಾಗಿ ಮಸೀದಿಯಲ್ಲಿ ಪ್ರಾರ್ಥನೆ: ಜಮೀರ್ ಅಹ್ಮದ್‌

India Pakistan: ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನ

Operation Sindoor ಮೂಲಕ ಹಳೆಯ ಸೇಡು ತೀರಿಸಿಕೊಂಡ ಅಜಿತ್ ದೋವಲ್

Operation Sindoor: ಗಡಿಯಲ್ಲಿ ಉದ್ವಿಗ್ನತೆ, ಪಂಜಾಬ್‌ನ ಆರು ಜಿಲ್ಲೆಗಳಲ್ಲಿ11ರವರೆಗೆ ಶಾಲೆಗಳಿಗೆ ರಜೆ

ಕೆಪಿಎಸ್‍ಸಿ ಪರೀಕ್ಷಾರ್ಥಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ

ಮುಂದಿನ ಸುದ್ದಿ
Show comments