Webdunia - Bharat's app for daily news and videos

Install App

ಶಿವಲಿಂಗಕ್ಕೆ ಮುಫ್ತಿ ಪೂಜೆ; ಮುಸ್ಲಿಂ ಮುಖಂಡರ ಆಕ್ಷೇಪ

Webdunia
ಶನಿವಾರ, 18 ಮಾರ್ಚ್ 2023 (11:28 IST)
ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಪೂಂಛ್‌ ಜಿಲ್ಲೆಯಲ್ಲಿರುವ ನವಗ್ರಹ ಮಂದಿರಕ್ಕೆ ತೆರಳಿ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಇದೊಂದು ರಾಜಕೀಯ ಗಿಮಿಕ್‌ ಎಂದು BJP ನಾಯಕರು ತಿವಿದಿದ್ದಾರೆ. ಇತ್ತ ಮುಸ್ಲಿಂ ಧಾರ್ಮಿಕ ಮುಖಂಡರು 'ಇದು ಇಸ್ಲಾಂ ವಿರೋಧಿ ನಡೆಯಾಗಿದೆ,' ಎಂದು ಕಿಡಿಕಾರಿದ್ದಾರೆ. ಆದರೆ ಇದ್ಯಾವುದಕ್ಕೂ ಮುಫ್ತಿ ಅವರು ಸೊಪ್ಪು ಹಾಕದೇ, ತಮಗೆ ಧರ್ಮ ಪಾಲನೆಯ ಬುದ್ಧಿವಾದ ಬೇಕಿಲ್ಲಎಂದು ಖಡಕ್ಕಾಗಿ ಹೇಳಿದ್ದಾರೆ. ನಮ್ಮದು ಜಾತ್ಯತೀತ ರಾಷ್ಟ್ರ. ನಾನು ವೈಯಕ್ತಿಕವಾಗಿ ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ನಮ್ಮ ನಾಯಕರಾದ ದಿವಂಗತ ಯಶಪಾಲ್‌ ಶರ್ಮಾ ಅವರು ನಿರ್ಮಿಸಿದ್ದ ಸುಂದರ ಮಂದಿರಕ್ಕೆ ತೆರಳಿದ್ದೆ. ಅಲ್ಲಿದ್ದ ಕೆಲವರು ನನಗೆ ನೀರು ತುಂಬಿದ ಪಾತ್ರೆಯನ್ನು ಅತ್ಯಂತ ಪ್ರೀತಿಯಿಂದ ಕೈಗಿತ್ತರು. ಅವರ ಪ್ರೀತಿಯನ್ನು ಗೌರವಿಸಿ ಶುದ್ಧ ಮನಸ್ಸಿನಿಂದಲೇ ಶಿವನಿಗೆ ಜಲಾಭಿಷೇಕ ಮಾಡಿದೆ. ಬೇರೆಯವರಿಂದ ಧರ್ಮದ ಬುದ್ಧಿವಾದ ಬೇಕಿಲ್ಲ, ಎಂದು ಮೆಹಬೂಬಾ ಮುಫ್ತಿ ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

PM Modi: ಆದಂ ಪುರ ವಾಯುನೆಲೆಗೆ ಮೋದಿ ಸರ್ಪ್ರೈಸ್ ಭೇಟಿ, ಸೆಲ್ಫೀಗೆ ಪೋಸ್

ಹಿಂದೂಗಳನ್ನು ಕೊಂದು ಕೋಲ್ಕತ್ತಾ ವಶಪಡಿಸಿಕೊಳ್ತೇನೆ ಎಂದ ಬಾಂಗ್ಲಾದೇಶ ಇಸ್ಲಾಮಿಸ್ಟ್ ವಿಡಿಯೋ

Arecanut price today: ಅಡಿಕೆ ಬೆಳೆಗಾರರಿಗೆ ನಿರಾಸೆ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

ಹೊರನಾಡು ಬಳಿಕ ಮಂತ್ರಾಲಯದಿಂದ ದೇಶ ರಕ್ಷಣೆಗೆ ಲಕ್ಷ ಲಕ್ಷ ದೇಣಿಗೆ

ಬ್ರಹ್ಮೋಸ್ ಕ್ರೆಡಿಟ್ ನಮ್ಮದು ಎಂದ ಕಾಂಗ್ರೆಸ್: ಮುಂಬೈ ಉಗ್ರ ದಾಳಿಯಾದಾಗ ಆಯುಧ ಪೂಜೆಗಿಡಲಾಗಿತ್ತಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments