ಮುಸ್ಲಿಂ ಸಮುದಾಯದ ನಾಯಕ ಜಮೀರ್ ಖಾನ್ರನ್ನು ಮೀರಾ ಸಾದಿಕ್ಗೆ ಹೋಲಿಸಿದ್ದು ಸರಿಯಿಲ್ಲ, ಅವರ ವ್ಯಕ್ತಿತ್ವ ಮೀರ್ಸಾದಿಕ್ಗೆ ಹೋಲುವುದಿಲ್ಲ ಎಂದು ಹಾಸನದ ಮುಸ್ಲಿಂ ಧರ್ಮಗುರು ಅಮ್ಜದ್ ಖಾನ್ ಹೇಳಿದ್ದಾರೆ.
ದೇವೇಗೌಡರು ಜಮೀರ್ ಅಹ್ಮದ್ಗೆ ಯಾವ ರೀತಿ ಬೇಕಾದರೂ ತೆಗಳಲಿ. ಆದರೆ ಮೀರ್ ಸಾದಿಕ್ ಎಂದು ಹೇಳಬಾರದು. ಕೂಡಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಕೀಯವಾಗಿ ದೇವೇಗೌಡರು ಏನು ಬೇಕಾದರೂ ಆರೋಪಿಸಲಿ. ಇಲ್ಲದಿದ್ರೆ ಜೆಡಿಎಸ್ ಪಕ್ಷ ಮುಸ್ಲಿಮರ ಬೆಂಬಲ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು. ಮುಸ್ಲಿಂ ಮತಗಳು ವಿಭಜನೆಯಾದಲ್ಲಿ ಬಿಜೆಪಿ ಪಕ್ಷಕ್ಕೆ ಲಾಭವಾಗುತ್ತದೆ ಎಂದರು