Select Your Language

Notifications

webdunia
webdunia
webdunia
webdunia

ಎಪಿ ಉಪಚುನಾವಣೆ: ಅವಿರೋಧ ಆಯ್ಕೆಯಾದ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ

ಎಪಿ ಉಪಚುನಾವಣೆ: ಅವಿರೋಧ ಆಯ್ಕೆಯಾದ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ
ಹೈದರಾಬಾದ್ , ಶನಿವಾರ, 25 ಅಕ್ಟೋಬರ್ 2014 (17:33 IST)
ಆಂಧ್ರಪ್ರದೇಶದ ಅಲ್ಲಗಡ್ಡಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಭುಮಾ ಅಖಿಲ ಪ್ರಿಯಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ನವೆಂಬರ್ 8 ರಂದು ನಡೆಯಬೇಕಾಗಿದ್ದ ಉಪಚುನಾವಣೆಗಾಗಿ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದ್ದು, ಕಣಕ್ಕಿಳಿದಿದ್ದ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದಿದ್ದರಿಂದ  ಅಖಿಲ ಪ್ರಿಯಾರೊಬ್ಬರೇ ಏಕೈಕ ಅಭ್ಯರ್ಥಿಯಾಗಿ ಉಳಿದುಕೊಂಡಿದ್ದರು. 
 
ಪರಿಣಾಮವಾಗಿ, ಅಖಿಲ ಪ್ರಿಯಾ ಅವರನ್ನು ವಿಜಯಿ ಎಂದು ಘೋಷಿಸಲಾಯಿತು ಎಂದು ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯಿಂದ ಲಭ್ಯವಾದ ಮೂಲಗಳು ತಿಳಿಸಿವೆ. 
 
ಕಳೆದ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ವೈಎಸ್ಆರ್ ಅಭ್ಯರ್ಥಿಯಾಗಿದ್ದ ಅಖಿಲ ಪ್ರಿಯಾ ತಾಯಿ ಶೋಭಾ ನಾಗಿ ರೆಡ್ಡಿ  ಚುನಾವಣೆಗೂ ಮುನ್ನ ನಡೆದ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದರು. ಆದರೆ ಚುನಾವಣೆಯಲ್ಲಿ ಅವರಿಗೆ ಗೆಲುವಾಗಿತ್ತು. ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಿದ ಚುನಾವಣಾ ಆಯೋಗ ಉಪಚುನಾವಣೆಯನ್ನು ಘೋಷಿಸಿತ್ತು.  ಜಗನ್ ಮೋಹನ ರೆಡ್ಡಿ  ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಿನಂತಿಯ ಮೇರೆಗೆ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಆಡಳಿತಾರೂಢ ಟಿಡಿಪಿ ಮತ್ತು ಕಾಂಗ್ರೆಸ್ ಒಪ್ಪಿಕೊಂಡಿದ್ದವು. 

Share this Story:

Follow Webdunia kannada