Webdunia - Bharat's app for daily news and videos

Install App

ಬೀದಿಜಗಳದ ಆರೋಪದಡಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಬಂಧನ

Webdunia
ಮಂಗಳವಾರ, 26 ಆಗಸ್ಟ್ 2014 (18:17 IST)
ಮಾಜಿ ಟೆಸ್ಟ್ ಕ್ರಿಕೆಟಿಗ ಮತ್ತು ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರನ್ನು ಬೀದಿಜಗಳ ನಡೆಸಿದ ಪ್ರಕರಣ ಒಂದರಲ್ಲಿ ಹರಿಯಾಣಾದ ಪೋಲಿಸರು ಬಂಧಿಸಿದ್ದಾರೆ. 

ಕ್ರಿಕೆಟರ್ ಪರಿವರ್ತಿತ ನಟನನ್ನು ಪಂಚಕುಲದಿಂದ ಬಂಧಿಸಲಾಗಿದ್ದು , ಅತಿಕ್ರಮಣ ಪ್ರವೇಶ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ ಅಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು  ಪೊಲೀಸ್, ಪಂಚಕುಲದ ಪೊಲೀಸ್ ಉಪ ಆಯುಕ್ತ  ರಾಹುಲ್ ಶರ್ಮಾ ಹೇಳಿದ್ದಾರೆ.
 
ಯೋಗರಾಜ್ ತಮ್ಮ ತುಟುಂಬ ಸದಸ್ಯರು ಮತ್ತು ಸಂಬಂಧಿಕರ ಜತೆಯಲ್ಲಿ  ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು.  ಬರ್ತ್‌ಡೇ ಪಾರ್ಟಿ ಮುಗಿದ ನಂತರ  ಮನೆಗೆ ಬಂದ ಸಂಬಂಧಿಕರೆಲ್ಲ ಹಿಂತಿರುಗುತ್ತಿದ್ದ ಸಮಯದಲ್ಲಿ ಘಟನೆ ನಡೆದಿದೆ.  ಅವರ ಸಂಬಂಧಿಕರು  ಕಾರ್ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಸಿಂಗ್ ನೆರೆಹೊರೆಯವರ ಬಳಿ ವಾದಕ್ಕಿಳಿದಿದ್ದಾರೆ. ಆಗ ತಮ್ಮ ಸಂಬಂಧಿಕರ ಪರ ಮಾತನಾಡಲು ಸಿಂಗ್, ಮತ್ತಿಬ್ಬರು  ಸ್ಥಳಕ್ಕೆ ಬಂದರು. 
 
ಆಗ ಸಿಂಗ್ ಮತ್ತು ಅವರ ನೆರೆಮನೆ ನಿವಾಸಿ ನಿವೃತ್ತ ಚಂದೀಗಡ್ ಪೊಲೀಸ್ ಡಿಎಸ್ಪಿ, ನಡುವೆ ಜಗಳವಾಗಿದೆ. ಆ ಕಾರಣಕ್ಕೆ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ. 
 
ತಮ್ಮ ಬಂಧನಕ್ಕೂ ಮೊದಲು ಪತ್ರಕರ್ತರ ಜತೆ ಮಾತನಾಡುತ್ತಿದ್ದ ಸಿಂಗ್, ಡಿಎಸ್ಪಿ ಮಕ್ಕಳು  ನಮ್ಮ ಸಂಬಂಧಿಕರ ಜತೆ ಮಾರಾಮಾರಿಗಿಳಿದಿದ್ದರು ಎಂದು ಹೇಳಿದ್ದಾರೆ. 
 
ಆದರೆ ಇದನ್ನು ನಿರಾಕರಿಸಿರುವ ನಿವೃತ್ತ ಪೋಲಿಸ್ ಅಧಿಕಾರಿ, ಸಿಂಗ್ ಕಡೆಯಿಂದ ಮೊದಲು ಹಲ್ಲೆ ನಡೆಯಿತು ಎಂದಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments