Webdunia - Bharat's app for daily news and videos

Install App

ಯೋಗ ಧಾರ್ಮಿಕ ಚಟುವಟಿಕೆಯಲ್ಲ: ಪ್ರಧಾನಿ

Webdunia
ಬುಧವಾರ, 22 ಜೂನ್ 2016 (15:34 IST)
ಯೋಗ ಧಾರ್ಮಿಕ ಚಟುವಟಿಕೆಯಲ್ಲ, ಇದನ್ನು ಯಾವುದೇ ವಿವಾದದಡಿ ಎಳೆತರುವುದು ಸರಿಯಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಎರಡನೇ ಅಂತರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಪ್ರಧಾನಿ ಚಂದೀಗಡದಲ್ಲಿ ಯೋಗಾಭ್ಯಾಸ ಮಾಡಿ ಮಾತನ್ನಾಡುತ್ತಿದ್ದ ಪ್ರಧಾನಿ ಯೋಗ ಧಾರ್ಮಿಕ ಆಚರಣೆ ಎಂಬ ಭಾವನೆಯನ್ನು ದೂರವಾಗಿಸಲು ಪ್ರಯತ್ನಿಸಿದರು. ಯೋಗ ನಾಸ್ತಿಕರಿಗೂ ಮತ್ತು ಆಸ್ತಿಕರಿಗಾಗಿಯೂ ಅವಶ್ಯವಾದದ್ದು ಎಂದು ಅವರು ಅಭಿಪ್ರಾಯ ಪಟ್ಟರು. 
 
 
ಕೆಲವರು ಯೋಗವನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ. ಇದನ್ನು ಬದುಕಿನ ಭಾಗವಾಗಿ ಅಳವಡಿಸಿಕೊಳ್ಳಿ ಎಂದು ತಮ್ಮ ಜತೆ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡ 30,000 ಜನರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. 
 
ಯೋಗಕ್ಕೆ ಯಾವುದೇ ಭೇದ-ಭಾವವಿಲ್ಲ. ಬಡವರು ಶ್ರೀಮಂತರು ಯೋಗ ಮಾಡುತ್ತಾರೆ. ಸಂಪೂರ್ಣ ಜಗತ್ತು ತನ್ನದೇ ರೀತಿಯಲ್ಲಿ ಯೋಗಕ್ಕೆ ಶರಣಾಗಿದೆ. ಇದು ಪರಲೋಕದ ವಿಜ್ಞಾನವಲ್ಲ, ಇಹಲೋಕದ ವಿಜ್ಞಾನ. ಇದು ತ್ಯಾಗದ ದಿನ. ತೆಗೆದುಕೊಳ್ಳುವ ದಿನವಲ್ಲ. ಆರೋಗ್ಯಕ್ಕೆ ಹಲವಾರು ದಿನಾಚರಣೆಗಳಿವೆ. ಆದರೆ ಯೋಗ ವಿಶ್ವದ ಸಾಮಾನ್ಯರ ದಿನಾಚರಣೆಯಾಗಿದೆ. ಒಂದೇ ವರ್ಷದಲ್ಲಿ ವಿಶ್ವದಲ್ಲಿ ವಿಶಿಷ್ಠ ಸ್ಥಾನಗಳಿಸಿದೆ. ಯೋಗ ದಿನದ ಮುಂದಾಳತ್ವವನ್ನು ಭಾರತ ವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಶುಭ ಗಳಿಗೆಯಲ್ಲಿ ಸಂಪೂರ್ಣ ದೇಶದ ಜನತೆ ಒಂದಾಗಿದ್ದೇವೆ. ಸಕಲ ರೋಗಕ್ಕೂ ದಿವ್ಯ ಜೌಷಧವಾದ ಯೋಗಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತೇಜನ ಕಲ್ಪಿಸಲಾಗುವುದು. ಮುಂದಿನ ವರ್ಷದಿಂದ ಅಂತರಾಷ್ಟ್ರೀಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯೋಗ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ತಲಾ ಒಬ್ಬರು ಯೋಗಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಭಾರತದಲ್ಲಿ ಮಧುಮೇಹದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದ್ದು ಯೋಗವೇ ಅದಕ್ಕೆ ಅತ್ಯುತ್ತಮ ಔಷಧವಾಗಿದೆ ಎಂದು ಪ್ರಧಾನಿ ಹೇಳಿದರು.
 
ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಹರಿಯಾಣಾ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪ್ರಧಾನಿಗೆ ಸಾಥ್ ನೀಡಿದರು. ವಿವಿಧ ಗಣ್ಯರು ಸೇರಿದಂತೆ 30 ಸಾವಿರ ಜನರ ಜತೆ ಪ್ರಧಾನಿ ಯೋಗಾಭ್ಯಾಸ ಮಾಡಿದರು.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
< >
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
< >
< >
 
< >

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

ಮುಂದಿನ ಸುದ್ದಿ