Select Your Language

Notifications

webdunia
webdunia
webdunia
webdunia

ಮೋದಿ ಸಂಪುಟದಲ್ಲಿ ಯಡಿಯೂರಪ್ಪಗೆ ಕೃಷಿ ಸಚಿವ ಸ್ಥಾನ

ಮೋದಿ ಸಂಪುಟದಲ್ಲಿ ಯಡಿಯೂರಪ್ಪಗೆ ಕೃಷಿ ಸಚಿವ ಸ್ಥಾನ
ಬೆಂಗಳೂರು , ಸೋಮವಾರ, 19 ಮೇ 2014 (15:27 IST)
ಶಿವಮೊಗ್ಗ ಸಂಸದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾವಿ ಪ್ರದಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಲೋಕಸಭೆ ಚುನಾವಣೆಯಲ್ಲಿ ಮೂರುವರೆ ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದ ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಯಡಿಯೂರಪ್ಪ ಅವರಿಗೆ ಕೇಂದ್ರ ಕೃಷಿ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಬಲ್ಲ ಮೂಲಗಳು ಮಾಹಿತಿ ರವಾನಿಸಿವೆ.
 
ರಾಜ್ಯದ ಮತ್ತೊಬ್ಬ ಸಂಸದ ಅನಂತ್ ಕುಮಾರ್‌ಗೆ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸ್ಥಾನ ನೀಡಲಾಗುತ್ತಿದೆ. ಬಿಜೆಪಿಯ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಯವರಿಗೆ ಮೂಲಸೌಕರ್ಯ ಖಾತೆ ವಹಿಸಿಕೊಳ್ಳುವ ಸಾಧ್ಯತೆಗಳಿವೆ
 
ಸುಷ್ಮಾ ಸ್ವರಾಜ್‌ಗೆ ಮಾನವ ಸಂಪನ್ಮೂಲ ಅಥವಾ ವಿದೇಶಾಂಗ ಖಾತೆ ನೀಡುವ ಸಾಧ್ಯತೆಗಳಿವೆ. ಅರುಣ್ ಜೇಟ್ಲಿಯವರಿಗೆ ಹಣಕಾಸು ಖಾತೆ, ವರುಣ್ ಗಾಂಧಿಗೆ ಯುವಜನಖಾತೆ, ಕೆ.ವಿ.ಕಾಮತ್‌ಗೆ ರಾಜ್ಯ ಹಣಕಾಸು ಸಚಿವ ಖಾತೆ, ನೀಡುವ ಸಾಧ್ಯತೆಗಳಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 
  

Share this Story:

Follow Webdunia kannada