Select Your Language

Notifications

webdunia
webdunia
webdunia
webdunia

ಯಶವಂತಪುರ-ಪೀಣ್ಯ: ಸೆಪ್ಟಂಬರ್ 21ರಿಂದ 25ರವರೆಗೆ ಮೆಟ್ರೋ ಸ್ಥಗಿತ

ಯಶವಂತಪುರ-ಪೀಣ್ಯ: ಸೆಪ್ಟಂಬರ್ 21ರಿಂದ 25ರವರೆಗೆ ಮೆಟ್ರೋ ಸ್ಥಗಿತ
ಬೆಂಗಳೂರು , ಶನಿವಾರ, 20 ಸೆಪ್ಟಂಬರ್ 2014 (09:25 IST)
ನಾಳೆಯಿಂದ (ಸೆಪ್ಟಂಬರ್ 21)  ಸೆಪ್ಟಂಬರ್ 25ರವರೆಗೆ  ಯಶವಂತಪುರದಿಂದ ಪೀಣ್ಯ ಕೈಗಾರಿಕಾ ಪ್ರದೇಶದವರೆಗಿನ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪೀಣ್ಯದಿಂದ ಜಾಲಹಳ್ಳಿ ನಿಲ್ದಾಣದವರೆಗೆ ಕೇಬಲಿಂಗ ಕಾರ್ಯ ಮಾಡಬೇಕಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಮಂತ್ರಿ ಸ್ಕ್ವೇರ್‌ನಿಂದ  ಪೀಣ್ಯ ಕೈಗಾರಿಕಾ ಪ್ರದೇಶದವರೆಗೆ ಓಡಾಡುತ್ತಿದ್ದ ಮೆಟ್ರೋ ನಾಳೆಯಿಂದ 5 ದಿನಗಳ ಕಾಲ ಕೇವಲ ಯಶವಂತಪುರದವರೆಗೆ ಮಾತ್ರ  ಸಂಚರಿಸಲಿದೆ.
 
ಈ ಮಾರ್ಗದಲ್ಲಿ ನಿತ್ಯ ಪ್ರಯಾಣಿಸುವ ಸುಮಾರು 35 ಸಾವಿರ ಪ್ರಯಾಣಿಕರಿಗೆ ಇದರಿಂದ ತೊಡಕುಂಟಾಗುತ್ತಿದ್ದು, ಇದರಿಂದ ಅಸಮಾಧಾನ ವ್ಯಕ್ತಪಡಿಸಿರುವ ನಾಗರಿಕರು, ರಾತ್ರಿ ಸಮಯದಲ್ಲಿ ಕೇಬಲಿಂಗ್ ಕಾರ್ಯವನ್ನು ಮಾಡಬಹುದಿತ್ತು ಎಂದು ಹೇಳುತ್ತಿದ್ದಾರೆ. 

Share this Story:

Follow Webdunia kannada