Webdunia - Bharat's app for daily news and videos

Install App

ಬುರ್ಹಾನ್ ವಾನಿಯನ್ನು ಕೊಲ್ಲಬಾರದಿತ್ತು: ವಿವಾದ ಸೃಷ್ಟಿಸಿದ ಜಮ್ಮು ವಿವಿ ವಿಸಿ

Webdunia
ಶುಕ್ರವಾರ, 11 ನವೆಂಬರ್ 2016 (16:22 IST)
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಕೊಲ್ಲದಿದ್ದರೆ ಚೆನ್ನಾಗಿರುತ್ತಿತ್ತು, ಅದರ ಬದಲು ಆತನನ್ನು ಜೈಲಿನಲ್ಲಿರಿಸಬೇಕಾಗಿತ್ತು ಎಂದು ಹೇಳುವುದರ ಮೂಲಕ ಜಮ್ಮು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಆರ್.ಡಿ ಶರ್ಮಾ ಹೊಸ ವಿವಾದವನ್ನು ತಲೆಗೆಳೆದುಕೊಂಡಿದ್ದಾರೆ. 
 
ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನ್ನಾಡುತ್ತ, ಆತನನ್ನು ಸಾಯುವವರೆಗೆ ಜೈಲಲ್ಲಿ ಇಡಬಹುದಿತ್ತು. ಕೊಲ್ಲುವುದಕ್ಕಿಂತ ಇದೇ ಉತ್ತಮವಾಗಿತ್ತು. ನನಗೆ ಹಾಗನ್ನಿಸುತ್ತದೆ. ಅಮಾಯಕರನ್ನು ಕೊಂದ ಮತ್ತು ವಿನಾಶಕ್ಕೆ ಕಾರಣರಾದ ಉಗ್ರರನ್ನು ಹತ್ಯೆಗೈಯ್ಯುವುದು ಸರಿಯಾದುದ್ದೆ. ಆದರೆ ಕಾಶ್ಮೀರದ ಜನರು ಈಗಲು ಉಗ್ರರ ಪರವಾಗಿದ್ದಾರೆ ಎನ್ನುವುದೇ ಎದುರಾಗುವ ಸಮಸ್ಯೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
 
ಉಗ್ರನನ್ನು ಕೊಂದ ಬಳಕವೇ ಈ ದೊಡ್ಡ ಸಮಸ್ಯೆ ಪ್ರಾರಂಭವಾಗಿದ್ದು. ನಾನು ಹೇಳುತ್ತಿರುವುದು ಎಷ್ಟು ಸರಿ, ಎಷ್ಟು ತಪ್ಪು ಎಂದು ಗೊತ್ತಿಲ್ಲ. ಆತನನ್ನು ಬಂಧಿಸಿದ್ದರೆ ಮಕ್ಕಳ ಶಾಲಾ ಶಿಕ್ಷಣ ಹಾಳಾಗುತ್ತಿರಲಿಲ್ಲ. ನಾನು ರಾಜಕಾರಣಿಯಾಗಿ ಈ ಮಾತುಗಳನ್ನಾಡುತ್ತಿಲ್ಲ. ಒಬ್ಬ ಶಿಕ್ಷಣತಜ್ಞನಾಗಿ ಅಷ್ಟೇ ಎಂದಿದ್ದಾರೆ ಶರ್ಮಾ.
 
ಕಾಶ್ಮೀರದ ವಿದ್ಯಾರ್ಥಿಗಳು ಸಮರ್ಪಿತ ಮನೋವೃತ್ತಿಯವರು, ಸಂಘಟಿತರು ಮತ್ತು ತಮ್ಮ ವೃತ್ತಿಜೀವನದ ಬಗ್ಗೆ ಅಪಾರ ಕಾರಳಿಯುಳ್ಳವರು. ಆದರೆ ತಮ್ಮ ಮೇಲೆ ದೌರ್ಜನ್ಯವಾಗುತ್ತಿದೆ ಎಂದರೆ ಅವರು ಹೋರಾಟಕ್ಕಿಳಿಯುತ್ತಾರೆ ಎಂದು ಉಪಕುಲಪತಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments