Webdunia - Bharat's app for daily news and videos

Install App

ಓಡಿ ಹೋಗಿ ಕೂಡುತ್ತಿದೆ ಈ ಜೋಡಿ; ಆದರಿದು ಪ್ರೇಮ ವಿವಾಹವಲ್ಲ

Webdunia
ಶುಕ್ರವಾರ, 3 ಫೆಬ್ರವರಿ 2017 (11:33 IST)
ಸಮುದ್ರದ ಆಳದಲ್ಲಿ, ಆಗಸದಲ್ಲಿ ಹಾರಾಡುತ್ತ, ಆನ್ಲೈನ್‌ನಲ್ಲಿ... ಹೀಗೆ ವಿಶಿಷ್ಠವಾಗಿ ಮದುವೆಯಾಗಿರುವುದರ ಬಗ್ಗೆ ಕೇಳಿರುತ್ತೀರಾ. ಆದರೆ ಇದು ಇದೆಲ್ಲಕ್ಕಿಂತ ವಿಭಿನ್ನವಾದ ಮದುವೆ. ಈ ಜೋಡಿ ಓಡಿ ಹೋಗಿ ಮದುವೆಯಾಗುತ್ತಿದೆ.  ಅದಕ್ಕೆ ಪೋಷಕರ ವಿರೋಧ ಕಾರಣವಲ್ಲ.  ಹಿರಿಯರು ಒಪ್ಪಿಕೊಂಡು ಆಯೋಜಿಸಿರುವ ಮದುವೆ ಇದು. ಇದೇನಿದು ಹೀಗೆ ಎನ್ನುತ್ತೀರಾ? ಈ ಅಪರೂಪದ ಮದುವೆ ಕಥೆಯನ್ನು ನೀವೇ ಓದಿ.

 
ಮಹಾರಾಷ್ಟ್ರದ ಸತಾರ ಜಿಲ್ಲೆಯ ಜಾವಿಲ್ ತೆಹ್ಸಿಲ್ ನಿವಾಸಿಗಳಾದ ನವನಾಥ್ ಹಾಗೂ ಪೂನಂ ಎಂಬುವವರೇ ವಿಭಿನ್ನ ರೀತಿಯಲ್ಲಿ ವಿವಾಹ ಬಂಧನಕ್ಕೆ ಒಳಗಾಗುತ್ತಿರುವವರು. ವಧು ಮತ್ತು ವರ ಇಬ್ಬರು ಮ್ಯಾರಥಾನ್ ಓಟಗಾರರಾಗಿದ್ದು ತಮ್ಮಿಬ್ಬರ ಹೊಸ ಜೀವನವನ್ನು ವಿನೂತನವಾಗಿ ಆರಂಭಿಸುವ ಆಕಾಂಕ್ಷೆ ಇವರದು. ಹೀಗಾಗಿ 25 ಕೀಲೋಮೀಟರ್ ಓಡಿಕೊಂಡು ವಿವಾಹ ನೋಂದಣಿ ಕಚೇರಿಗೆ ಹೋಗಲಿದ್ದಾರೆ. 
 
ನಮ್ಮೊಂದಿಗೆ ಮ್ಯಾರಥಾನ್‌ನಲ್ಲಿ ಓಡುವ ಮೂಲಕ ಆಶೀರ್ವಾದ ನೀಡಿ ಎಂದು ತಮ್ಮೆಲ್ಲ ಬಂಧುಬಳಗ, ಸ್ನೇಹಿತರಲ್ಲೂ ಅವರು ಕೇಳಿಕೊಂಡಿದ್ದಾರೆ.
 
ಇಂದು ಅವರ ಮದುವೆ ನಡೆಯುತ್ತಿದ್ದು, ವಿವಾಹದ ಸ್ಥಳ ಹಾಗೂ ಮ್ಯಾರಥಾನ್ ಪ್ರಾರಂಭವಾಗುವ ಸ್ಥಳದ, ಸಮಯದ ಮಾಹಿತಿಯನ್ನು ಕರೆಯೋಲೆಯಲ್ಲಿಯೇ ನಮೂದಿಸಲಾಗಿದೆ. 
 
ಇನ್ನು ಈ ಮದುವೆಯ ಮ್ಯಾರಾಥಾನ್‌ನಲ್ಲಿ ನೂತನ ವಧು-ವರರನ್ನು ಆಶೀರ್ವದಿಸಲು ಮುಖ್ಯ ಅತಿಥಿಗಳಾಗಿ ಅಲ್ಲಿನ ಡಿಸಿ ಅಶ್ವಿನ್‌ ಮುದ್ಗಲ್‌ ಹಾಗೂ ಎಸ್‌ಪಿ ಸಂದೀಪ್‌ ಪಾಟೀಲ್‌ ಆಗಮಿಸಲಿದ್ದಾರೆಂದು ತಿಳಿಸಿದ್ದಾರೆ.   
 
ಜಿಲ್ಲಾಧಿಕಾರಿ ಅಶ್ವಿನ್ ಮುದ್ಗಲ್ ಮತ್ತು ಪೊಲೀಸ್ ಅಧೀಕ್ಷಕ ಸಂದೀಪ್ ಪಾಟೀಲ್ ಅವರನ್ನು ಮ್ಯಾರಥಾನ್ ಮದುವೆಯ ಅತಿಥಿಗಳಾಗಿ ಆಹ್ವಾನಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 6 ಪ್ರಾಣಿಗಳು ಸಾವು, ಪ್ರಾಣಿ ಪ್ರಿಯರಲ್ಲಿ ಆತಂಕ

ಮದುವೆಯಾಗುವುದಾಗಿ ಗರ್ಭಿಣಿ ಮಾಡಿ ವಂಚನೆ: ಮಗನ ಪರಾರಿಗೆ ಸಹಾಯ ಮಾಡಿದ ಬಿಜೆಪಿ ಮುಖಂಡ ಅರೆಸ್ಟ್‌

90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ದಲೈ ಲಾಮಾ: 130 ವರ್ಷಗಳ ಕಾಲ ಬದುಕುವ ವಿಶ್ವಾಸ

ಮರಾಠಿ ಮಾತನಾಡಲ್ಲ ಎಂದ ಉದ್ಯಮಿ ಕಚೇರಿ ಮೇಲೆ ಕಲ್ಲೆಸೆದ ಎಂಎನ್‌ಎಸ್ ಕಾರ್ಯಕರ್ತರು

ಅರಣ್ಯ ಇಲಾಖೆಯ‌ಲ್ಲಿ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌, 6000ಹುದ್ದೆಗಳು ಶೀಘ್ರದಲ್ಲೇ ಭರ್ತಿ

ಮುಂದಿನ ಸುದ್ದಿ
Show comments