Select Your Language

Notifications

webdunia
webdunia
webdunia
webdunia

ಋಣಾತ್ಮಕ ಪ್ರಚಾರ: ಆತಂಕಕ್ಕೊಳಗಾಗಿ ಬಿಜೆಪಿ ಸಚಿವರ ಸಭೆ ಕರೆದ ಅಮಿತ್ ಶಾ

ಋಣಾತ್ಮಕ ಪ್ರಚಾರ: ಆತಂಕಕ್ಕೊಳಗಾಗಿ ಬಿಜೆಪಿ ಸಚಿವರ ಸಭೆ ಕರೆದ ಅಮಿತ್ ಶಾ
ನವದೆಹಲಿ , ಮಂಗಳವಾರ, 1 ಸೆಪ್ಟಂಬರ್ 2015 (15:55 IST)
ಸರ್ಕಾರದ ಬಗ್ಗೆ  ಋಣಾತ್ಮಕ ಪ್ರಚಾರ ವ್ಯಾಪಕವಾಗಿ ಏರುತ್ತಿದ್ದು, ಆತಂಕಕ್ಕೆ ಒಳಗಾಗಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಮಧ್ಯಾಹ್ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಚಿವರ ಜತೆ ಸಭೆ ನಡೆಸಿದರು. 
 
ಸದ್ಯದಲ್ಲಿಯೇ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕರ ನಡುವೆ 3 ದಿನಗಳ ಮಹತ್ವದ ಸಭೆ ನಡೆಯಲಿದ್ದು  ಈ ಹಿನ್ನೆಲೆಯಲ್ಲಿ  ಈ ಸಭೆಯನ್ನು ಆಯೋಜಿಸಲಾಗಿದೆ.  ಬಿಹಾರ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಈ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಯಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಕಾರ್ಯಕ್ರಮ ಮತ್ತು ನಡೆಯುವ ಸ್ಥಳದ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ. ಬಹುಶಃ ದೆಹಲಿಯಲ್ಲಿಯೇ ಈ ಸಭೆ ನಡೆಯಲಿದ್ದು ಹಲವಾರು ಕೇಂದ್ರ ಸಚಿವರು ಸಹ ಪಾಲ್ಗೊಳ್ಳಲಿದ್ದಾರೆ.
 
ಸಭೆಯಲ್ಲಿ ಆರ್‌ಎಸ್ಎಸ್ ಬಿಹಾರ್ ಚುನಾವಣೆ, ಒಂದು ಶ್ರೇಣಿ ಒಂದು ಪಿಂಚಣಿ ಹೋರಾಟ ಮತ್ತು ಪಟೇಲ್ ಮೀಸಲಾತಿ ಆಂದೋಲನದ ಕುರಿತು ಚರ್ಚಿಸುವ ಸಾಧ್ಯತೆ ಇದೆ.

Share this Story:

Follow Webdunia kannada