Select Your Language

Notifications

webdunia
webdunia
webdunia
webdunia

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್`ಗೆ ತಂದೆ ಹೇಳಿದ ಕಿವಿಮಾತು

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್`ಗೆ ತಂದೆ ಹೇಳಿದ ಕಿವಿಮಾತು
ಡೆಹ್ರಾಡೂನ್ , ಬುಧವಾರ, 22 ಮಾರ್ಚ್ 2017 (09:20 IST)
ಉತ್ತರಪ್ರದೇಶ ಸಿಎಂ ಆಗಿ ಅಚ್ಚರಿಕರ ರೀತಿಯಲ್ಲಿ ಆಯ್ಕೆಯಾದ ಯೋಗಿ ಆದಿತ್ಯನಾಥ್`ಗೆ ಅವರ ತಂದೆ ನಿವೃತ್ತ ಫಾರೆಸ್ಟ್ ರೇಂಜರ್, 84 ವರ್ಷದ ಆನಂದ್ ಸಿಂಗ್ ಕಿವಿಮಾತು ಹೇಳಿದ್ದಾರೆ.
 

ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬೇಕಾದ ಅಗತ್ಯವಿದೆ. ಬುರ್ಕಾ ಹಾಕಿರುವ ಮಹಿಳೆಯರೂ ಅವಿನಿಗೆ ಮತ ಹಾಕಿದ್ದಾರೆ. ಎಲ್ಲ ಧರ್ಮದ ಜನರಿಗೆ ಗೌರವದಿಂದ ನಡೆಸಿಕೊಳ್ಳುವ ಮೂಲಕ ಻ವರ ಹೃದಯ ಗೆಲ್ಲಬೇಕಿದೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.

ನನ್ನ ಮಗನಿಗೆ ಅತಿ ಹೆಚ್ಚು ಜವಾಬ್ದಾರಿ ಇದೆ. ತ್ರಿಬಲ್ ತಲಾಖ್ ಮತ್ತು ತಮ್ಮ ರಕ್ಷಣೆ ಮಾಡುತ್ತಾರೆಂಬ ನಂಬಿಕೆಯಿಂದ ಮುಸಲ್ಮಾನ್ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ಎಲ್ಲ ವರ್ಗದ ಜನ ಅಭಿವೃದ್ಧಿಗಾಗಿ ಮತ ಹಾಕಿದ್ದಾರೆ. ಅದನ್ನ ಉಳಿಸಿಕೊಳ್ಲಬೇಕಾದ ಜವಾಬ್ದಾರಿ ಮಗನ ಹೆಗಲ ಮೇಲಿದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಷೇಪಾರ್ಹ ಹೇಳಿಕೆ: ಕಮಲ್ ಹಾಸನ್ ವಿರುದ್ಧ ಮೊಕದ್ದಮೆ ದಾಖಲು