Webdunia - Bharat's app for daily news and videos

Install App

ಕಾಂಗ್ರೆಸ್ ಶಾಸಕ ಸಿದ್ಧಾರ್ಥ್ ಸಿಂಗ್ ನನ್ನನ್ನು ಅಪಹರಿಸಿಲ್ಲ ಎಂದ ಹದಿಹರೆಯದ ಯುವತಿ

Webdunia
ಶುಕ್ರವಾರ, 29 ಜನವರಿ 2016 (20:50 IST)
ಕಾಂಗ್ರೆಸ್ ಶಾಸಕ 17 ವರ್ಷದ ಹದಿಹರೆಯದ ಯುವತಿಯನ್ನು ಅಪಹರಿಸಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ, ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಹಾಜರಾದ ಯುವತಿ ತನ್ನನ್ನು ಶಾಸಕ ಸಿದ್ಧಾರ್ಥ ಅಪಹರಿಸಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.
 
ಶಾಸಕರ ಕಾರು ಚಾಲಕ ಪಂಕಜ್ ತನ್ನ ಬಾಯ್‌ಫ್ರೆಂಡ್ ಆಗಿದ್ದು, ಆತನೊಂದಿಗೆ ತೆರಳಿದ್ದಾಗಿ ಮಾಹಿತಿ ನೀಡಿದ್ದಾಳೆ.  
 
ಹದಿಹರೆಯದ ಯುವತಿ ನಿಧಿ ತನ್ನ ಗೆಳೆಯ ಕಾಂಗ್ರೆಸ್ ಶಾಸಕ ಸಿದ್ಧಾರ್ಥ ಸಿಂಗ್ ಕಾರು ಚಾಲಕ ಪಂಕಜ್ ಶರ್ಮಾ ಅವರೊಂದಿಗೆ ಪಾಟ್ನಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನು ಮಹಾರಾಜ್ ಮುಂದೆ ಹಾಜರಾಗಿ ವಿವರಣೆ ನೀಡಿದ್ದಾಳೆ. 
 
ಕಳೆದ ಎರಡು ವರ್ಷಗಳಿಂದ ಪಂಕಜ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ಯುವತಿ ಮಾಹಿತಿ ನೀಡಿದ್ದಾಳೆ. 
 
ತಮ್ಮ ತಂದೆ ನೀಡಿದ ಅಪಹರಣದ ದೂರಿನಲ್ಲಿ ಸತ್ಯಾಂಶವಿಲ್ಲ. ತಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು ನಿನ್ನೆ ರಾತ್ರಿ ವಿವಾಹವಾಗಿದ್ದಾಗಿ ನಿಧಿ ತಿಳಿಸಿದ್ದಾರೆ.
 
ಪೊಲೀಸರು ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗುವುದು ಎಂದು ಮಹಾರಾಜ್ ಹೇಳಿದ್ದಾರೆ.
 
ನನ್ನ ತಂದೆ 50 ವರ್ಷದ ವ್ಯಕ್ತಿಗೆ ನನ್ನ ಇಚ್ಚೆಗೆ ವಿರುದ್ಧವಾಗಿ ವಿವಾಹ ಮಾಡಿಕೊಡಲು ಸಿದ್ದತೆ ನಡೆಸಿದ್ದರು. ನಾನು ಅದನ್ನು ತಡೆದಾಗ ಕಾಂಗ್ರೆಸ್ ಶಾಸಕ ಸಿದ್ಧಾರ್ಥ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾಳೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments