Webdunia - Bharat's app for daily news and videos

Install App

ಸತಿಸಹಗಮನ: ಪತಿಯ ಚಿತೆಗೆ ಹಾರಿದಳಾ ಸತಿ?

Webdunia
ಗುರುವಾರ, 2 ಏಪ್ರಿಲ್ 2015 (09:26 IST)
50 ವರ್ಷದ ಮಹಿಳೆಯೊಬ್ಬಳ ಮೃತದೇಹ  ಆಕೆಯ ಪತಿಯ ಚಿತೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿರುವ ಕರಾಳ ಘಟನೆ ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದಿದೆ. ಇದು ಭಾರತದಲ್ಲಿ ಸ್ವಾತಂತ್ರಪೂರ್ವದಲ್ಲಿಯೇ ನಿರ್ಬಂಧಿಸಲ್ಪಟ್ಟ ಸತಿ ಸಹಗಮನ ಪದ್ಧತಿ ಈಗಲೂ ಜೀವಂತವಾಗಿದೆ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. 
 

ಜಿಲ್ಲೆಯ ಲೋಹತ್ತಾ ಗ್ರಾಮದ ನಿವಾಸಿ ತುಕಾರಾಮ್‌ ಮಾನೆ ಕಳೆದ ಭಾನುವಾರ ಹೃದಯಾಘಾತದಿಂದ ಮರಣ ಹೊಂದಿದ್ದರು.  ಸೋಮವಾರ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಮೃತದೇಹವನ್ನು ಸುಟ್ಟ ಕೆಲವೇ ಗಂಟೆಗಳಲ್ಲಿ ಸೋಮವಾರ ಸಂಜೆಯಿಂದ ತುಕಾರಾಮ್ ಪತ್ನಿ ಉಷಾ ನಾಪತ್ತೆಯಾಗಿದ್ದರು. ಮಂಗಳವಾರ  ತುಕಾರಾಮ್‌ ಅವರ ಚಿತಾ ಭಸ್ಮವನ್ನು ಸಂಗ್ರಹಿಸಲೆಂದು ಸ್ಮಶಾನಕ್ಕೆ ಹೋದ ಕುಟುಂಬದವರಿಗೆ ತುಕಾರಾಮ್‌ ಚಿತೆಯಲ್ಲಿ ಸುಟ್ಟು ಕರಕಲಾಗಿದ್ದ  ಅವರ ಪತ್ನಿ ಉಷಾಳ ದೇಹವೂ ಕೂಡ ಕಂಡಿದೆ.
 
ಮರಾಠಾವಾಡ ವಿಭಾಗದ ಕಿಲ್ಲಾರಿ ಠಾಣೆಯ ಪೊಲೀಸರು ಹಠಾತ್ ಸಾವು ಎಂದು ಪ್ರಕರಣವನ್ನು ದಾಖಲಿಸಿಕೊಂಡು ಇದು ಸತಿ ಸಹಗಮನವೋ ಎಂಬುದರ ತನಿಖೆ ನಡೆಸುತ್ತಿದ್ದಾರೆ.
 
ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments