ಬಲರಾಮಪುರ್: ಉತ್ತರ ಪ್ರದೇಶದ ಬಲರಾಮಪುರ್ ಜಿಲ್ಲೆಯಲ್ಲಿ ಠಾಣೆಗೆ ಹೋದ ಯುವತಿಯ ಮೇಲೆ ಇನಿಸ್ಪೆಕ್ಟರ್ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ಪೋಲಿಸ ಅಧೀಕ್ಷಕ ಬಿಡಿ ಶುಕ್ಲಾ ಆರೋಪಿ ಇನಿಸ್ಪೆಕ್ಟರ್ ಮಹೇಂದ್ರ ಯಾದವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಆದರೆ, ಆರೋಪಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಯುವತಿ ಒಬ್ಬ ಯುವಕನ ಜೊತೆಗೆ ಮದುವೆಯಾಗಿದ್ದಳು. ಈ ಕುರಿತು ತವರು ಮನೆಯವರು ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈದೇ ಕಾರಣಕ್ಕೆ ಆಗಸ್ಟ್ 13 ರಂದು ತನ್ನ ಪತಿ ಜೊತೆಗೆ ಠಾಣೆಗೆ ಹೋಗಿದ್ದಳು. ಅದೇ ರಾತ್ರಿ ಇನಿಸ್ಪೆಕ್ಟರ್ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.