Webdunia - Bharat's app for daily news and videos

Install App

ಇದು ಹತಾಶ ತಾಯಿಯ ಕರುಣಾಜನಕ ಕಥೆ

Webdunia
ಸೋಮವಾರ, 23 ಜನವರಿ 2017 (15:43 IST)
ಈ ತಾಯಿಯ ದುಃಖ ಯಾರಿಂದಲೂ ಅಳಿಸಲಾಗದ್ದು. ಹೋದ ವರ್ಷ ಪತಿಯನ್ನು ಕಳೆದುಕೊಂಡಿದ್ದ ಈಕೆ ಸರಿಯಾಗಿ ಒಂದು ವರ್ಷಕ್ಕೆ ಮೊನ್ನೆ ನಡೆದ ರೈಲು ಅಪಘಾತದಲ್ಲಿ ಇದ್ದಿಬ್ಬರು ಮಕ್ಕಳನ್ನು ಸಹ ಕಳೆದುಕೊಂಡು ದಿಕ್ಕೆಟ್ಟು ಹೋಗಿದ್ದಾಳೆ.

ಇದು 40 ವರ್ಷ ವಯಸ್ಸಿನ ಜಶೋಧಾಳ ಹೃದಯ ವಿದ್ರಾವಕ ಕಥೆ. ಶನಿವಾರ ರಾತ್ರಿ ಆಂಧ್ರದಲ್ಲಿ ನಡೆದ ಜಗದಲ್ಪುರ-ಭುವನೇಶ್ವರ ಎಕ್ಸಪ್ರೆಸ್ ರೈಲು ದುರಂತದಲ್ಲಾಕೆ ತನ್ನೆರಡು ಹದಿಹರೆಯದ ಮಕ್ಕಳನ್ನು ಕಳೆದುಕೊಂಡಿದ್ದಾಳೆ. ಸರಿಯಾಗಿ ತನ್ನ ಪತಿಯನ್ನು ಕಳೆದುಕೊಂಡ ಒಂದು ವರ್ಷಗಳ ನಂತರ ಆಕೆಗೆ ಮತ್ತೆಂದೂ ಮೇಳಲಾಗದಂತಹ ಆಘಾತ ಬರಸಿಡಿಲಿನಂತೆ ಬಡಿದಿದೆ. ರೈಲು ದುರಂತದಲ್ಲಿ ದುರ್ಮರಣವನ್ನಪ್ಪಿದ 39 ಜನರಲ್ಲಿ ಆಕೆಯ 16 ವರ್ಷದ ಮಗಳು ಮತ್ತು 18 ವರ್ಷದ ಮಗ ಕೂಡ ಸೇರಿದ್ದಾರೆ. 
 
ಘಟನೆ ವಿವರ: ಪೊಂಗಲ್ ಆಚರಣೆಗೆಂದು ಜಶೋಧಾ ತನ್ನೆರಡು ಮಕ್ಕಳ ಜತೆ ವಿಜಯನಗರದಿಂದ ಭವಾವಿಪಟ್ಣದಲ್ಲಿರುವ ತವರಿಗೆ ಹೋಗಿದ್ದಳು. ಅಲ್ಲಿಂದ ಮರಳುವಾಗ ರೈಲನ್ನೇರಿದ್ದಾಳೆ. ರೈಲು 9.30ಕ್ಕೆ ರಾಯಘಡ ತಲುಪುತ್ತಿದ್ದಂತೆ ತಾಯಿ ಮಕ್ಕಳು ಊಟ ಮಾಡಿ, ಕೆಲ ಹೊತ್ತು ಮಾತನಾಡಿ ವಿಜಯನಗರಮ್ ಹತ್ತಿರ ಬಂದಾಗ ಇಳಿಯಲು ಅನುಕೂಲವಾಗಲೆಂದು ಮೊಬೈಲ್‌ನಲ್ಲಿ ಆಲಾರಾಂ ಇಟ್ಟು ನಿದ್ದೆ ಹೋಗಿದ್ದಾರೆ. 
 
ರಾಯಘಡ ದಾಟಿದ 20 ನಿಮಿಷಗಳ ಬಳಿಕ ದೊಡ್ಡ ಶಬ್ಧ ಕೇಳಿ ಎಚ್ಚರವಾಯಿತು. ಯಾರೋ ರೈಲಿಗೆ ಕಲ್ಲು ಹೊಡೆಯುತ್ತಿದ್ದಾರೆನಿಸಿತು. ಮರುಕ್ಷಣಕ್ಕೆ ರೈಲು ಹಳಿ ತಪ್ಪಿರುವುದು ಅರಿವಾಯಿತು. ಸುತ್ತಲೆಲ್ಲ ಕೂಗಾಟ ಕೇಳಿ ಬಂತು. ನಾನು ಕಷ್ಟಪಟ್ಟು ಬೋಗಿಯಿಂದ ಹೊರಬಂದು ಮಕ್ಕಳಿಗಾಗಿ ಕಾದೆ. ಆದರೆ ಅವರು ಬರಲೇ ಇಲ್ಲ. ಅವರಿಬ್ಬರು ಬಾರದ ಲೋಕಕ್ಕೆ ಪಯಣಿಸಿಯಾಗಿತ್ತು ಎಂದು ಗದ್ಗದಿಸುತ್ತಾಳೆ ಆ ತಾಯಿ.
 
ವಿಜಯನಗರದ ನಿವಾಸಿಯಾದ ಜಶೋಧಾ ಪತಿ ಕಳೆದ ವರ್ಷ ಜನವರಿ 22 ರಂದು ಕಾಯಿಲೆಯಿಂದಾಗಿ ಕೊನೆಯುಸಿರೆಳೆದಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆ.1ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ: ಎ.ನಾರಾಯಣಸ್ವಾಮಿ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನ, ಬೆಳ್ಳಿ ಬೆಲೆ ಇಂದು ಶಾಕ್ ಆಗುವಂತಿದೆ

ಅವಧಿಗೂ ಮುನ್ನ ರಾಜೀನಾಮೆ ನೀಡಿದ ಉಪರಾಷ್ಟ್ರಪತಿಗಳು ಯಾರೆಲ್ಲಾ ಇಲ್ಲಿದೆ ಲಿಸ್ಟ್

ಹೆಣ್ಣು ಮಕ್ಕಳು ಬೇಗ ಮುಟ್ಟಾಗುತ್ತಿರುವುದು ಯಾಕೆ: ಖ್ಯಾತ ವೈದ್ಯೆ ಪದ್ಮಿನಿ ಪ್ರಸಾದ್ ಟಿಪ್ಸ್

ಮುಂದಿನ ಸುದ್ದಿ
Show comments