ಮಹಿಳೆಯೊಬ್ಬರ ಮೇಲೆ ಗುಂಪೊಂದು ಗ್ಯಾಂಗ್ರೇಪ್ ಮಾಡಿ ಅವರ ಪತಿಯ ಎದುರೇ ಕುತ್ತಿಗೆ ಹಿಸುಕಿ ಕೊಂದ ಪೈಶಾಚಿಕ ಘಟನೆ ಅಲಿಗಢ್ ಜಿಲ್ಲೆಯ ಕಾಸ್ಗಂಜ್ನಲ್ಲಿ ಸಂಭವಿಸಿದೆ. ದಂಪತಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಬಳಿಕ ಸೈಕಲ್ನಲ್ಲಿ ಮನೆಗೆ ಹಿಂತಿರುಗುವಾಗ ಗುಂಪೊಂದು ಅವರ ಮೇಲೆ ದಾಳಿ ಮಾಡಿ ಮಹಿಳೆಯನ್ನು ಗದ್ದೆಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಬಳಿಕ ಕೊಂದು ಹಾಕಿದರು.
ದುರ್ದೈವಿ ಮಹಿಳೆಯ ಪತಿ ಸುನಿಲ್ ಕುಮಾರ್ ಪ್ರತಿರೋಧ ಒಡ್ಡಿದರೂ ಕೂಡ ಅವರಿಗೆ ಅನೇಕ ಸಾರಿ ಮಾರಕಾಸ್ತ್ರದಿಂದ ಇರಿಯಲಾಯಿತು. ಅವರು ಅಲಿಗಢ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಹಿಂದಿನ ಎಲ್ಲಾ ಕಾರಣಗಳನ್ನು ನಾವು ಬಗೆಯುತ್ತಿದ್ದು, ಮೃತ ಮಹಿಳೆಯ ಪತಿ ವೈರುದ್ಧ್ಯದ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಪತ್ನಿಗೆ ಅವಳ ಪತಿಯ ಮನೆಯವರು ಮತ್ತು ಪತಿ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.