Webdunia - Bharat's app for daily news and videos

Install App

ಗುಂಡಿನ ದಾಳಿಯಿಂದ ಯುವತಿಯ ಜೀವ ಉಳಿಸಿದ ಲಾಕೆಟ್

Webdunia
ಬುಧವಾರ, 21 ಸೆಪ್ಟಂಬರ್ 2016 (14:46 IST)
ಇಂತಹ ದೃಶ್ಯಗಳನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಾ. ಆದರೆ ಗುರ್ಗಾಂವ್‌ನ ಸೆಕ್ಟರ್ 55 ರಾಪಿಡ್ ಮೆಟ್ರೋ ಸಮೀಪ ನಡೆದ ಈ ಘಟನೆ ನಿಜಕ್ಕೂ ಆಶ್ಚರ್ಯ ತರಿಸುವಂತದ್ದು. 
ಸ್ಟೋರ್ ಒಂದರಲ್ಲಿ ಉಪ ವ್ಯವಸ್ಥಾಪಕನಾಗಿರುವ 27 ವರ್ಷದ ಯುವಕನೊಬ್ಬ ತನ್ನ ಜತೆ ಮದುವೆ ಮಾಡಿಕೊಳ್ಳಲು ಒಪ್ಪದ ಯುವತಿಗೆ ಅತ್ಯಂತ ಸನಿಹದಿಂದ ಗುಂಡು ಹಾರಿಸಿದ್ದಾನೆ. ಆದರೆ ಆ ಗುಂಡು ಆಕೆಯ ದೇಹವನ್ನು ಹೊಕ್ಕಲೇ ಇಲ್ಲ. ಆಕೆ ಧರಿಸಿದ್ದ ಲೋಹದ ಒಂದು ತುಂಡು ಪವಾಡಸದೃಶವಾಗಿ ಆಕೆಯನ್ನು ಬದುಕಿಸಿದೆ. ಆ ಯುವತಿ ಧರಿಸಿದ್ದ ಪದಕಕ್ಕೆ ತಾಗಿದ ಗುಂಡು ಕೆಳಕ್ಕೆ ಬಿದ್ದಿದೆ. ಯುವತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
 
ಆರೋಪಿಯನ್ನು ಅಶೋಕ್ ಕುಮಾರ್ ಎಂದು ಗುರುತಿಸಲಾಗಿದ್ದು ಕಳೆದ ಅನೇಕ ತಿಂಗಳಿಂದ ಆತ 32 ವರ್ಷದ ಕೋಲಕತ್ತಾ ಮೂಲದ ಮಹಿಳೆಯೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದ. ಕಳೆದ ಜುಲೈ ತಿಂಗಳಲ್ಲಿ ಆಕೆ ಆತನಿಂದ ದೂರವಾಗಿದ್ದಳು. ಆದರೆ ಆತ ಮಾತ್ರ ಆಕೆಯನ್ನು ದೂರ ಮಾಡಿಕೊಳ್ಳಲು ಒಪ್ಪಿರಲಿಲ್ಲ.
 
ಆಕೆ ಮದುವೆಗೆ ಒಪ್ಪದಿದ್ದಾಗ ಕೊಲೆಯ ಯೋಜನೆ ರೂಪಿಸಿದ ಅಶೋಕ್ ಕುಮಾರ್, ಸೋಮವಾರ ಸಂಜೆ  8 ಗಂಟೆ ಸುಮಾರಿಗೆ ಆಕೆ ತನ್ನ ಬಾಡಿಗೆ ಮನೆಗೆ ಮರಳುತ್ತಿದ್ದಾಗ ಭೇಟಿಯಾಗಿ ಹಠಾತ್ ಆಗಿ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ ಆಕೆ ಧರಿಸಿದ್ದ ಲಾಕೆಟ್ ಆಕೆಯ ಜೀವ ಕಾಪಾಡಿದೆ. ಆತ ಎರಡನೆಯ ಗುಂಡು ಹಾರಿಸುವಷ್ಟರಲ್ಲಿ ಅಲ್ಲಿದ್ದ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments