Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಸ್ವಚ್ಛ, ಪರಿಣಾಮಕಾರಿ ಆಡಳಿತ ನೀಡುತ್ತೇವೆ: ಕಿರಣ್ ಬೇಡಿ

ದೆಹಲಿಯಲ್ಲಿ ಸ್ವಚ್ಛ, ಪರಿಣಾಮಕಾರಿ ಆಡಳಿತ ನೀಡುತ್ತೇವೆ: ಕಿರಣ್ ಬೇಡಿ
ನವದೆಹಲಿ , ಶನಿವಾರ, 24 ಜನವರಿ 2015 (15:57 IST)
ಪ್ರಬಲ, ಪರಿಣಾಮಕಾರಿ ಆಡಳಿತ ದೆಹಲಿಯ ತುರ್ತು ಅಗತ್ಯವಾಗಿದ್ದು, ನನ್ನ 40 ವರ್ಷಗಳ ಸೇವಾನುಭವವನ್ನು ದೆಹಲಿಯ ಅಭಿವೃದ್ಧಿಗೆ  ಅರ್ಪಿಸಲು ಬದ್ಧವಾಗಿದ್ದೇನೆ ಎಂದು ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಿರಣ್ ಬೇಡಿ ಪುನರುಚ್ಚರಿಸಿದ್ದಾರೆ.
ದೆಹಲಿಯ ಜನರ ಜತೆ ಸಂಪರ್ಕ ಸಾಧಿಸಲು ದೇಶದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಬೇಡಿ  ಟ್ವಿಟರ್‌ನ್ನು ಬಹುವಾಗಿ ಬಳಸಿಕೊಳ್ಳುತ್ತಿದ್ದಾರೆ. 
 
40 ವರ್ಷಗಳ ನನ್ನ ಆಡಳಿತಾತ್ಮಕ ಮತ್ತು ಸಾಮಾಜಿಕ ಸೇವೆಯ ಅನುಭವವನ್ನು ದೆಹಲಿಯ ಮುಖ್ಯಮಂತ್ರಿಯಾಗಿ  ನಿಮ್ಮ ಸೇವೆ ಮಾಡಲು ಬಯಸುತ್ತೇನೆ ಎಂದು ರಾಷ್ಟ್ರ ರಾಜಧಾನಿಯ ಜನರನ್ನುದ್ದೇಶಿಸಿ ಬೇಡಿ ಟ್ವಿಟ್ ಮಾಡಿದ್ದಾರೆ. 

Share this Story:

Follow Webdunia kannada