Webdunia - Bharat's app for daily news and videos

Install App

ವಿಶ್ವದಲ್ಲಿಯೇ ಭಾರತೀಯ ಮುಸ್ಲಿಮರು ನಾಚಿಕೆಗೇಡಿಗಳು: ಹಿಜ್ಬುಲ್ ಕಮಾಂಡರ್

Webdunia
ಮಂಗಳವಾರ, 6 ಜೂನ್ 2017 (13:32 IST)
ಭಾರತದಲ್ಲಿ ಮುಸ್ಲಿಮರೇ ಮುಸ್ಲಿಂ ಸಮುದಾಯಕ್ಕೆ ವಿರೋಧಿಯಾಗಿದ್ದಾರೆ. ವಿಶ್ವದಲ್ಲಿಯೇ ಭಾರತೀಯ ಮುಸ್ಲಿಮರು ನಾಚಿಕೆಗೇಡಿ ಮುಸ್ಲಿಮರಾಗಿದ್ದಾರೆ ಎಂದು ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದಿನ್ ಕಮಾಂಡರ್ ಝಾಕಿರ್ ಮೂಸಾ ಮುಸ್ಲಿಮರ ವಿರುದ್ಧವೇ ಗುಡುಗಿದ್ದಾನೆ.
ಭಾರತೀಯ ಮುಸ್ಲಿಮರಿಗೆ ತಮ್ಮನ್ನು ತಾವು ಮುಸ್ಲಿಮರು ಎಂದು ಕರೆದುಕೊಳ್ಳುವುದಕ್ಕೆ ನಾಚಿಕೆಪಡಬೇಕು. ನಮ್ಮ ಸಹೋದರಿಯರ ಮೇಲೆ ದೌರ್ಜನ್ಯವೆಸಗಿ ಅಪಮಾನ ಮಾಡಲಾಗುತ್ತಿದೆ. ಆದರೆ, ಭಾರತೀಯ ಮುಸ್ಲಿಮರು ಇಸ್ಲಾಂಗೆ ಗೌರವ ದೊರೆತಿದೆ ಎಂದು ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
 
ಐತಿಹಾಸಿಕ ಇಸ್ಲಾಮಿಕ್ 'ಜಂಗ್-ಇ-ಬದ್ರ್' ಅನ್ನು ಉಲ್ಲೇಖಿಸಿದ ಅವರು, 313 ಜನರಿದ್ದರೂ ವಿಶ್ವವನ್ನು ಆಳಿದರು, ನಾವು ಈಗ ಕೋಟಿ ಕೋಟಿ ಮುಸ್ಲಿಮರಿದ್ದೇವೆ ಆದರೆ ಗುಲಾಮರಂತೆ ಎಂದು ಹೀಯಾಳಿಸಿದ್ದಾನೆ.
 
ಭಾರತೀಯ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ ಮೂಸಾ, ನಿಮಗೆ ಈಗಲೂ ನಮ್ಮನ್ನು ಸೇರಲು ಅವಕಾಶವಿದೆ, ಮುಂದೆ ಬನ್ನಿ ಇಲ್ಲವಾದಲ್ಲಿ ತುಂಬಾ ವಿಳಂಬವಾಗಬಹುದು. ಗೋರಕ್ಷಕರಿಗೆ ಇಸ್ಲಾಂ ಮತ್ತು ಮುಸ್ಲಿಂ ಧರ್ಮದ ತಾಕತ್ತು ತೋರಿಸಿ ಎಂದು ಗುಡುಗಿದ್ದಾರೆ.
 
"ನಾವು ಪ್ರತಿ ಕೊಲೆಯ ಪ್ರತೀಕಾರವನ್ನೂ ಮುಸ್ಲಿಮರ ವಿರುದ್ಧ ಪ್ರತಿ ದೌರ್ಜನ್ಯದ ಸೇಡು ತೀರಿಸಿಕೊಳ್ಳುತ್ತೇವೆ. ಷರಿಯಾವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಸ್ಥಾಪಿಸುವೆವು ಎಂದು ಹಿಜ್ಬಲ್ ಮುಜಾಹಿದಿನ್ ಕಮಾಂಡರ್ ಝಾಕಿರ್ ಮೂಸಾ ಎಚ್ಚರಿಸಿದ್ದಾನೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Stray Dog Attack: ದಾಳಿಯ ಭೀಕರತೆಗೆ ಉಳಿದಿದ್ದು ಮಗುವಿನ ಮುಖದ ಮೂಳೆಗಷ್ಟೇ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ ಪ್ರಕರಣ: ಬಿಹಾರದ 7ಮಂದಿಯ ಬಂಧನ

Kedarnath, ತಾಂತ್ರಿಕ ದೋಷ: ಹೆದ್ದಾರಿಯಲ್ಲೇ ಭೂಸ್ಪರ್ಶವಾದ ಹೆಲಿಕಾಪ್ಟರ್‌, Video

ನನಗೆ ಹೆಸರು ಬೇಡ, ಸಾಯುವ ಮುನ್ನಾ ನಿಮ್ಮ ಋಣ ತೀರಿಸುತ್ತೇನೆ: ಕುಮಾರಸ್ವಾಮಿ ಕಣ್ಣೀರು

Bengaluru Stampede: ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲು

ಮುಂದಿನ ಸುದ್ದಿ
Show comments