Webdunia - Bharat's app for daily news and videos

Install App

ಕೊಲೆಗೆ ಕಾರಣವಾದ ಐ ಲವ್ ಯೂ ಸಂದೇಶ

Webdunia
ಶನಿವಾರ, 3 ಅಕ್ಟೋಬರ್ 2015 (12:53 IST)
ಪತ್ನಿಯ ಮೊಬೈಲ್‌ನಲ್ಲಿ ಐ ಲವ್ ಯು ಎಂಬ ಸಂದೇಶವಿರುವುದನ್ನು ನೋಡಿದ ಪತಿ ಆಕೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ನಗರದ ಗಂಗಾಕಾಲೋನಿ ನಿವಾಸಿಯಾಗಿರುವ ರವೀನಾ ಎಂಬ ಮಹಿಳೆಯೇ ತನ್ನ ಪತಿ ಪಂಕಜ್‌ನಿಂದ ಕೊಲೆಯಾದ ದುರ್ದೈವಿಯಾಗಿದ್ದಾಳೆ.
 
ರವೀನಾ ಜನ್ಮದಿನದಂದು ಆಕೆಯ ಸ್ನೇಹಿತನೊಬ್ಬ ಶುಭಾಶಯದ ಸಂದೇಶ ಕಳುಹಿಸಿದ್ದ. ಅದಕ್ಕೆ ಪ್ರತಿಯಾಗಿ ರವೀನಾ ಐ ಲವ್ ಯೂ ಸಂದೇಶವನ್ನು ಕಳುಹಿಸಿದ್ದಳು. ಅದನ್ನು ನೋಡಿದ್ದ ಪಂಕಜ್ ಪತ್ನಿಯ ಮೇಲೆ ಅನುಮಾನಗೊಂಡಿದ್ದಾನೆ. ತನಗೆ ಮೋಸ ಮಾಡಿದ ಪತ್ನಿಯನ್ನು ಉಳಿಸಲೇ ಬಾರದೆಂದು ನಿರ್ಧರಿಸಿದ ಆತ ಕಳೆದ 10 ದಿನಗಳಿಂದ ಆಕೆಯನ್ನು ಕೊನೆಗಾಣಿಸಲು ಕಾಯುತ್ತಿದ್ದ. ಮೊದಲು ಪತ್ನಿಗೆ ಸಂದೇಶ ಕಳುಹಿಸಿದವನನ್ನು ಕೊಲ್ಲಲು ಯೋಚಿಸಿದ ಆತ ನಂತರ ಪತ್ನಿಯನ್ನೇ ಕೊಂದಿದ್ದಾನೆ. 
 
'ಸಂದೇಶ ನೋಡಿ ನನ್ನ ರಕ್ತ ಕುದಿಯಿತು. ಅದು ಎರಡು ದಿನಗಳ ನಂತರ ಡಿಲಿಟ್ ಆಗಿದ್ದು ನನ್ನ ಅನುಮಾನವನ್ನು ಹೆಚ್ಚಿಸಿತು. ಇದರಿಂದ ಕುಪಿತನಾದ ನಾನು ಬುಧವಾರ ರಾತ್ರಿ ಪತ್ನಿ ಮಗನ ಜತೆ ಮಲಗಿದ್ದಾಗ ಉಸಿರುಗಟ್ಟಿಸಿ ಕೊಲ್ಲಲೆತ್ನಿಸಿದೆ. ಆಕೆ ಪ್ರಜ್ಞೆಯನ್ನು ಕಳೆದುಕೊಂಡಾಗ ಪತ್ನಿಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಹತ್ಯೆ ಮಾಡಿದೆ', ಎಂದು ಪೊಲೀಸ್ ತನಿಖೆಯ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. 
 
ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಪಂಕಜ್, ತಮ್ಮ ಮನೆಗೆ ನಾಲ್ವರು ಕಳ್ಳರು ಬಂದು ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಬಳಿಕ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
 
ಮೃತ ರವೀನಾ ಮತ್ತು ಪಂಕಜ್ ಕಳೆದ 2 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments