Webdunia - Bharat's app for daily news and videos

Install App

ಪತ್ನಿಯ ನೆರವಿನಿಂದ ಗೆಳೆಯನ ಹೆಂಡತಿಯ ಮೇಲೆ ಗಂಡ ಎಸಗಿದ ರೇಪ್ , ವಿಡಿಯೋ ಚಿತ್ರೀಕರಿಸಿದ ಪತ್ನಿ

Webdunia
ಗುರುವಾರ, 17 ಜುಲೈ 2014 (12:44 IST)
ಒಬ್ಬ ವಿಶ್ವಾಸದ್ರೋಹಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ನೆರವಿನಿಂದ ಪ್ರಾಣ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ನಡೆಸಿದಷ್ಟೇ ಅಲ್ಲದೇ, ತನ್ನ ಕುಕೃತ್ಯದ ವಿಡಿಯೋ ಚಿತ್ರೀಕರಣ ನಡೆಸಿ ಆ ಮುಗ್ಧ ಯುವತಿಗೆ 6 ತಿಂಗಳ ಕಾಲ ಬೆದರಿಕೆ ಒಡ್ಡಿ ಪುನಃ ಪುನಃ ಆಕೆಯ ಮೇಲೆ ತನ್ನ ದುಷ್ಕೃತ್ಯವನ್ನು ಮುಂದುವರೆಸಿದ ಘಟನೆ ಇಂದೋರನಲ್ಲಿ ವರದಿಯಾಗಿದೆ. 

ಆತನ ಕಾಟ ತಾಳಲಾರದ ಯುವತಿ ಕೊನೆಗೂ ತನ್ನ ಗಂಡನಿಗೆ ಎಲ್ಲಾ ವಿಷಯ ತಿಳಿಸಿದ್ದಾಳೆ. ಮಿತ್ರದ್ರೋಹಿಯ ಈ ಕೀಚಕತನ  ಈ ಮೂಲಕ ಬೆಳಕಿಗೆ ಬಂದಿದ್ದು ಪಾಪಿ ಗೆಳೆಯ ಪತ್ನಿಸಮೇತ ಈಗ ಪೋಲಿಸರ ಅತಿಥಿಯಾಗಿದ್ದಾನೆ. 
 
ಇಂದೋರಿನ ಆಜಾದ್ ನಗರ್ ಇಲಾಖೆಯ ಪಿಂಕ್ ಸಿಟಿಯಲ್ಲಿ ವಾಸಿಸುತ್ತಿರುವ 29 ವರ್ಷದ ಯುವತಿಯೋರ್ವಳು ತನ್ನ ಗಂಡನ ಜತೆ ಪೋಲಿಸ್ ಠಾಣೆಗೆ ತಲುಪಿ  ಟೌವ್ನಶೀಫ್ ವಾಸಿ ಅರ್ಜುನ್ ಸೋನಿ ಮತ್ತು ಆತನ ಪತ್ನಿ ರೀಮಾ ವಿರುದ್ಧ ಅತ್ಯಾಚಾರ ಮತ್ತು ಇತರ ಆರೋಪಗಳ ಮೇಲೆ  ಪ್ರಕರಣ ದಾಖಲಿಸಿದ್ದಾಳೆ. 
 
"ಆರೋಪಿ ನನ್ನ ಗಂಡನ ಆತ್ಮೀಯ ಸ್ನೇಹಿತನಾಗಿದ್ದ. ವೃತ್ತಿಯಲ್ಲಿ ಇಬ್ಬರು ಕೂಡ ಚಾಲಕರು. ಜನೇವರಿ ತಿಂಗಳಲ್ಲಿ ಒಂದು ದಿನ ನನಗೆ ಫೇಶಿಯಲ್ ಮಾಡಬೇಕು , ಯಾವುದಾದರೂ ಬ್ಯೂಟಿ ಪಾರ್ಲರ್ ಒಂದಕ್ಕೆ ಕರೆದೊಯ್ಯಿ ಎಂದು ಕೇಳಿಕೊಂಡೆ. ಅದಕ್ಕೆ ನನ್ನ ಗಂಡ ಅವರ ಸ್ನೇಹಿತ ಅರ್ಜುನ್ ಹೆಂಡತಿ ಇದೇ ಕೆಲಸ ಮಾಡುವುದು. ಅವಳನ್ನು ಮನೆಗೆ ಕರೆದುಕೊಂಡು ಫೇಶಿಯಲ್ ಮಾಡಿಕೋ ಎಂದರು".
 
"ನನ್ನ ಗಂಡನ ಸಲಹೆಯಂತೆ ರೀನಾಳಿಗೆ ನಮ್ಮ ಮನೆಗೆ ಬರುವಂತೆ ಕರೆದೆ. ಆ ಸಮಯದಲ್ಲಿ ನನ್ನ ಗಂಡ  ಕೆಲಸಕ್ಕೆ ಹೋಗಿದ್ದರು. ರೀಮಾ ತನ್ನ ಗಂಡ ಅರ್ಜುನ್ ಬೈಕ್‌ನಲ್ಲಿ ಕುಳಿತು ತನ್ನ ಸಾಮಾನುಗಳನ್ನು ತೆಗೆದುಕೊಂಡು ನಮ್ಮ ಮನೆಗೆ ಬಂದಳು.  ನಾನು ಮನೆಯಲ್ಲಿ ಒಬ್ಬಳೇ ಇರುವುದನ್ನು ತಿಳಿದ ದಂಪತಿಗಳು ಷಡ್ಯಂತ್ರವನ್ನು ರಚಿಸಿಕೊಂಡೇ ಮನೆ ಒಳಗೆ ಬಂದರು. ಮಾತನಾಡಿಸುವ ನೆಪದಲ್ಲಿ ಅರ್ಜುನ್ ಕೂಡ ಮನೆ ಪ್ರವೇಶಿಸಿದ". 
 
"ಒಳಪ್ರವೇಶಿಸಿದ ಆತ ಪ್ರಾಣ ತೆಗೆಯುವ ಬೆದರಿಕೆ ಒಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ. ಆ ಸಮಯದಲ್ಲಿ ಅದೇ ಕೋಣೆಯಲ್ಲಿದ್ದ ಆತನ ಹೆಂಡತಿ ತನ್ನ ಗಂಡನ ಕುಕೃತ್ಯವನ್ನು ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡಳು. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನ ಪರಿವಾರದವರ ಪ್ರಾಣ ತೆಗೆಯುವೆವು ಮತ್ತು ನಿನ್ನ ಮಾನ ಹರಾಜು ಮಾಡುವೆವು ಎಂಬ ಬೆದರಿಕೆ ಒಡ್ಡಿದ ಅವರು 6 ತಿಂಗಳುಗಳ ಕಾಲ ಜತೆಗೆ ಬಂದು ಈ ಕೃತ್ಯವನ್ನು ಮುಂದುವರೆಸಿದ್ದಾರೆ ಮತ್ತು ನನ್ನಿಂದ ಹಣವನ್ನು ದೋಚಿದ್ದಾರೆ" ಎಂದು ಪೀಡಿತೆ ತನ್ನ ದೂರಿನಲ್ಲಿ ದಾಖಲಿಸಿದ್ದಾಳೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments