Webdunia - Bharat's app for daily news and videos

Install App

ಹಾಲು ತರಲು ಹಣ ಕೇಳಿದ ಪತ್ನಿಯನ್ನು ಸಜೀವವಾಗಿ ದಹಿಸಿದ ಪತಿ ಮಹಾಶಯ

Webdunia
ಶನಿವಾರ, 3 ಡಿಸೆಂಬರ್ 2016 (15:12 IST)
ಹಾಲು ಖರೀದಿಸಲು ಪತ್ನಿ ಹಣ ಕೇಳಿದ್ದರಿಂದ ಆಕ್ರೋಶಗೊಂಡ ಪತಿ ಮಹಾಶಯ ಅಕೆಯನ್ನು ಸಜೀವವಾಗಿ ದಹಿಸಲು ಯತ್ನಿಸಿದ ಹೇಯ ಘಟನೆ ವರದಿಯಾಗಿದೆ. ಮಹಿಳೆಗೆ ಶೇ.80 ರಷ್ಟು ಸುಟ್ಟಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
 
ಬೋಸರಿ ಪ್ರದೇಶದ ಬಾಲಾಜಿ ನಗರ ನಿವಾಸಿಯಾದ 21 ವರ್ಷ ವಯಸ್ಸಿನ ಮಹಿಳೆ ರೇಖಾ ಜಾಧವ್, ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯನ್ನು ಎದುರಿಸುತ್ತಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪತಿ ಶಹಾಜಿ ಜಾಧವ್‌ನನ್ನು ಪೊಲೀಸರು ಬಂಧಿಸಿದ್ದಾರೆ. 
 
ಪತಿ ಮತ್ತು ಪತ್ನಿಯ ಮಧ್ಯೆ ಪ್ರತಿನಿತ್ಯ ಕಲಹವಾಗುತ್ತಿದ್ದು, ರೇಖಾಳ ತಂದೆ ಆಕೆಯ ಮನೆಗೆ ತೆರಳಿ ಪತಿ ಪತ್ನಿಯ ಮಧ್ಯದ ವಿರಸವನ್ನು ಬಗೆಹರಿಸಲು ಪ್ರಯತ್ನಿಸಿದ್ದರು ಎಂದು ಭೋಸರಿ ಪೊಲೀಸ್ ಠಾಣೆಯ ಅಧಿಕಾರಿ ಭೀಮರಾವ್ ಶಿಂಗಾಡೆ ತಿಳಿಸಿದ್ದಾರೆ.
 
ಜೀವನ್ಮರಣದ ಸ್ಥಿತಿಯಲ್ಲಿರು ರೇಖಾ ಪೊಲೀಸರಿಗೆ ಹೇಳಿಕೆ ನೀಡಿ, ಬೆಳಿಗ್ಗೆ ಟೀ ತಯಾರಿಸುವಂತೆ ಪತಿ ನನಗೆ ಹೇಳಿದ.ಆದರೆ, ಮನೆಯಲ್ಲಿ ಹಾಲು ಇರಲಿಲ್ಲ. ಹಾಲು ತರಲು ಹಣ ನೀಡುವಂತೆ ಪತಿಯನ್ನು ಕೋರಿದಾಗ, ಕೋಪಗೊಂಡ ಆತ ನನ್ನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಎಂದು ತಿಳಿಸಿದ್ದಾಳೆ.
 
ಪೊಲೀಸರು ಆರೋಪಿ ಶಹಾಜಿ ಜಾಧವ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ನಡೆದಾಗ ತಾನು ಮನೆಯಲ್ಲಿಯೇ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಆತನ ಪತ್ನಿಯ ಹೇಳಿಕೆಯ ಮೇರೆಗೆ ಜಾಧವ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments