Webdunia - Bharat's app for daily news and videos

Install App

ಮದುವೆಯಾಗು ಎಂದಿದ್ದಕ್ಕೆ ಕೊಲೆ

Webdunia
ಶನಿವಾರ, 1 ಆಗಸ್ಟ್ 2015 (09:36 IST)
ಗಂಡನನ್ನು ಕಳೆದುಕೊಂಡಿದ್ದ ಯುವತಿಯೊಬ್ಬಳು ತಾನು ಪ್ರೇಮಿಸುತ್ತಿದ್ದ ವ್ಯಕ್ತಿಯ ಜತೆ ಮದುವೆಯಾಗು ಎಂದು ಬಲವಂತ ಮಾಡಿದ್ದಕ್ಕೆ ಆಕೆಯನ್ನಾತ ಕೊಲೆಗೈದಿದ್ದಾನೆ. ಗುರುವಾರ ರಾತ್ರಿ  ಸಿಂಗಾಪುರ ಲೇ ಔಟ್‌ನಲ್ಲಿ  ಈ ಘಟನೆ ನಡೆದಿದೆ.
 
ಮೃತಳನ್ನು ಮಂಜುಳಾ(21) ಎಂದು ಗುರುತಿಸಲಾಗಿದ್ದು  ಕಳೆದೆರಡು ವರ್ಷಗಳ ಹಿಂದೆ ಆಕೆ ಗಂಡನನ್ನು ಕಳೆದುಕೊಂಡಿದ್ದಳು. ತಾಯಿಯ ಜತೆ ವಾಸವಾಗಿದ್ದ ಆಕೆಗೆ ನಾಗರಾಜು ಎನ್ನುವವನ ಪರಿಚಯವಾಗಿತ್ತು. ಒಂದು ವರ್ಷದಿಂದ ಅವರಿಬ್ಬರು ಜತೆಯಾಗಿ ವಾಸವಾಗಿದ್ದರು.
 
ತನ್ನ ಮಗಳನ್ನು ಮದುವೆಯಾಗುವಂತೆ ಮಂಜುಳಾ ತಾಯಿ ನಾಗರಾಜು ಮೇಲೆ ಒತ್ತಡ ಹೇರುತ್ತಿದ್ದಳು. ಆದರೆ ಆತನಿಗೆ ಆಕೆಯನ್ನು ವಿವಾಹವಾಗುವುದು ಇಷ್ಟವಿರಲಿಲ್ಲ.
 
ಮಂಜುಳಾ ಕೂಡ  ತನ್ನನ್ನು ಮದುವೆಯಾಗುವಂತೆ ನಾಗರಾಜುವನ್ನು ಒತ್ತಾಯಿಸುತ್ತಿದ್ದಳು. ಆದರೆ ಏನೇನೋ ನೆಪ ಹೇಳಿ ಆತ ಮದುವೆಯನ್ನು ನಿರಾಕರಿಸುತ್ತಿದ್ದ.  ಇದೇ ವಿಚಾರಕ್ಕೆ ನಾಗರಾಜು ಮತ್ತು ಮಂಜುಳಾ ನಡುವೆ ಜಗಳವಾಗುತ್ತಿತ್ತು.
 
ತಾಯಿ ಮಗಳು ಒತ್ತಡ ಹೇರುತ್ತಿದ್ದರಿಂದ ರೋಷಿ ಹೋಗಿದ್ದ  ನಾಗರಾಜು ಗುರುವಾರ ರಾತ್ರಿ  ಮಂಜುಳಾಳ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ.
 
ಆತನೀಗ ವಿದ್ಯಾರಣ್ಯಪುರ ಪೊಲೀಸರ ವಶದಲ್ಲಿದ್ದಾನೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments