ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಕಾರನ್ನು ಕುಡಿದ ಮತ್ತಿನಲ್ಲಿ ಚೇಸ್ ಮಾಡಿ ಪೊಲೀಸರ ಅತಿಥಿಯಾದ ಯುವಕರು ತಾವು ಹಾಗೆ ಮಾಡಿದ್ದೇಕೆ ಎಂದು ರಹಸ್ಯ ಬಿಚ್ಚಿಟ್ಟಿದ್ದಾರೆ.
‘ಅಸಲಿಗೆ ನಮಗೆ ಅದು ಸ್ಮೃತಿ ಇರಾನಿ ಕಾರು ಎಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ಚೇಸ್ ಮಾಡುತ್ತಿರಲಿಲ್ಲ. ನಾವು ಗೆಳೆಯನ ಬರ್ತ್ ಡೇ ಪಾರ್ಟಿ ಆಚರಿಸಿ ಮರಳುತ್ತಿದ್ದಾಗ ಕಾರಿನಲ್ಲಿ ದೊಡ್ಡಕ್ಕೆ ಮ್ಯೂಸಿಕ್ ಹಾಕಿ, ಟ್ರಾಫಿಕ್ ನಿಯಮ ಗಾಳಿಗೆ ತೂರಿದ್ದು ತಪ್ಪು ಎಂದು ಒಪ್ಪಿಕೊಳ್ಳುತ್ತೇವೆ.
ನಮ್ಮ ಮುಂದೆ ಒಂದು ಕಾರು ಹೋಗುತ್ತಿತ್ತು. ಅದನ್ನು ಚೇಸ್ ಮಾಡಿ ಮುನ್ನುಗ್ಗಬೇಕು ಎಂದು ತಮಾಷೆ ಕೆಲಸ ಮಾಡಲು ಹೋದೆವು. ಆದರೆ ಅದರಲ್ಲಿ ಸಚಿವರಿದ್ದರು ಎಂದು ಗೊತ್ತಿರಲಿಲ್ಲ. ನಮ್ಮ ತಪ್ಪಿಗೆ ನಾವು ಕ್ಷಮೆ ಯಾಚಿಸಿದೆವು. ಹಾಗಿದ್ದರೂ ಅವರು ನಮ್ಮ ಮಾತು ಕೇಳಲಿಲ್ಲ. ಪೊಲೀಸರ ಬಳಿಗೆ ಕರೆದೊಯ್ದು ಕೇಸು ಜಡಿದರು’ ಎಂದು ಇಬ್ಬರು ಆಪಾದಿತರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ