Webdunia - Bharat's app for daily news and videos

Install App

ದೆಹಲಿ ಮೃಗಾಲಯದಲ್ಲಿ ಬಿಳಿ ಹುಲಿಯ ದಾಳಿಗೆ ಬಾಲಕ ಬಲಿ

Webdunia
ಮಂಗಳವಾರ, 23 ಸೆಪ್ಟಂಬರ್ 2014 (15:58 IST)
ದೆಹಲಿ ಮೃಗಾಲಯದಲ್ಲಿ ಬಿಳಿಯ ಹುಲಿಯೊಂದು 17 ವರ್ಷದ ಬಾಲಕನನ್ನು ಕೊಂದುಹಾಕಿದ ಭಯಾನಕ ಘಟನೆ  ಇಂದು ವರದಿಯಾಗಿದೆ. ಮೃಗಾಲಯದಲ್ಲಿ ಮಧ್ಯಾಹ್ನ ಹುಲಿಯನ್ನು ಇರಿಸಿದ್ದ ಆವರಣದ  ಬೇಲಿಯ ಮೇಲೆ ಹತ್ತಿ ಹುಲಿಯ ಚಿತ್ರವನ್ನು ಕ್ಲಿಕ್ಕಿಸುತ್ತಿದ್ದ 12 ನೇ ತರಗತಿಯ ಬಾಲಕ ಇದ್ದಕ್ಕಿದ್ದಂತೆ ಹುಲಿಯನ್ನು ಇಟ್ಟಿದ್ದ ಆವರಣದೊಳಕ್ಕೆ ಬಿದ್ದ. ಹುಲಿ ಸುಮಾರು 10 ನಿಮಿಷಗಳವರೆಗೆ ಬಾಲಕನನ್ನು  ದಿಟ್ಟಿಸಿ ನೋಡುತ್ತಿತ್ತು.

ಆದರೆ ಅಲ್ಲಿದ್ದ ಕೆಲವು ಪ್ರವಾಸಿಗಳು ಹುಲಿಯತ್ತ ಕಲ್ಲುತೂರಿದ್ದರಿಂದ ಹುಲಿಯ ಕ್ರೌರ್ಯ ಕೆರಳಿತ್ತು. ರೋಷಾವೇಷಗೊಂಡ ಹುಲಿ ದಿಢೀರನೇ ಹಾರಿ ಬಾಲಕನ  ಕುತ್ತಿಗೆಗೆ ಬಾಯಿ ಹಾಕಿ ಎಳೆದುಕೊಂಡು ಹೋಗಿ ಕೊಂದು ಹಾಕಿತು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

 ಬಾಲಕನ ಕುತ್ತಿಗೆ ಮತ್ತಿತರ ಭಾಗಗಳಲ್ಲಿ ಹುಲಿ ಕಚ್ಚಿದ್ದರಿಂದ  ನೋವಿನಿಂದ ಸುಮಾರು ಅರ್ಧಗಂಟೆವರೆಗೆ ಚೀರುತ್ತಿದ್ದ ಬಾಲಕನ ಧ್ವನಿ ಕ್ರಮೇಣ ಕ್ಷೀಣಿಸಿ ಮೃಗಾಲಯದ ಸಿಬ್ಬಂದಿ ಬಾಲಕನ ನೆರವಿಗೆ ಬರುವಷ್ಟರಲ್ಲಿ ಬಾಲಕನ ಪ್ರಾಣಪಕ್ಷಿ ಹಾರಿಹೋಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments