Webdunia - Bharat's app for daily news and videos

Install App

ಒಳ್ಳೆಯ ದಿನಗಳು ಎಲ್ಲಿವೆ? ನರೇಂದ್ರ ಮೋದಿಗೆ ಪವಾರ್ ಪಕ್ಷದ ತಿರುಗೇಟು

Webdunia
ಸೋಮವಾರ, 20 ಏಪ್ರಿಲ್ 2015 (16:19 IST)
ಜನರಿಗೆ ಉತ್ತಮ ದಿನಗಳನ್ನು ತರುತ್ತಿದ್ದೇವೆ ಎಂದು ಭರವಸೆ ನೀಡಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮೋದಿಯವರ ಮೇಲೆ ವಾಕ್ಬಾಣ ಪ್ರಯೋಗಿಸಿರುವ ಎನ್‌ಸಿಪಿ ಕಳೆದ ಒಂದು ವರ್ಷದಿಂದ ದೇಶದಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂದು ಹೇಳಿದೆ. 

ಲೋಕಸಭಾ ಚುನಾವಣೆ ಸಮಯದಲ್ಲಿ ನೀವು ಜನರಿಗೆ ವಾಗ್ದಾನ ಮಾಡಿದ್ದ ಉತ್ತಮ ದಿನಗಳು ಎಲ್ಲಿವೆ? ಕಳೆದೊಂದು ವರ್ಷದ ಎನ್‌ಡಿಎ ಆಡಳಿತದಲ್ಲಿ ರೈತರು, ಯುವಜನಾಂಗದವರು ಸೇರಿದಂತೆ ಸಮಾಜದಲ್ಲಿ ಯಾರ ಪರಿಸ್ಥಿತಿಯೂ ಬದಲಾಗಿಲ್ಲ ಎಂದು ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಕಿಡಿಕಾರಿದ್ದಾರೆ. 
 
"ಗಣರಾಜ್ಯೋತ್ಸವದ ಸಮಯದಲ್ಲಿ ಪ್ರಧಾನಿ ಮೋದಿಯವರು ಧರಿಸಿದ್ದ 10 ಲಕ್ಷ ಮೌಲ್ಯದ ಸೂಟ್ ಬಗ್ಗೆ ಟೀಕೆಗಿಳಿದ ಅನ್ವರ್, ಸ್ವತಃ ಮೋದಿಯವರಷ್ಟೇ ಅಚ್ಛೇ ದಿನ್ ಫಲಾನುಭವಿಗಳು. ರೈತರ ಯುವಜನರ ಮತ್ತು ಬಡವರ ಹಿತಾಸಕ್ತಿಗಳ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ವ್ಯಕ್ತಿ ಅಂತಹ ದುಬಾರಿ ಬಟ್ಟೆಯನ್ನು ಧರಿಸುವುದಿಲ್ಲ. ಅದು ದೇಶದಲ್ಲಿ ವ್ಯಾಪಕ ಸಂಖ್ಯೆಯಲ್ಲಿರುವ ಬಡವರಿಗೆ ಪರಿಹಾಸ್ಯ ಮಾಡಿದಂತೆ", ಎಂದಿದ್ದಾರೆ. 
 
ಕೇಂದ್ರ ಸರಕಾರದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ "ಒಡಕು ರಾಜಕೀಯ"ವನ್ನು ನಡೆಸುತ್ತಿದೆ, ಎಂದು ಕಟಿಹಾರ್ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅನ್ವರ್ ಆರೋಪಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments