Select Your Language

Notifications

webdunia
webdunia
webdunia
webdunia

ಭ್ರಷ್ಟಾಚಾರದ ಹೇಳಿಕೆ ನೀಡುವ ಪ್ರಧಾನಿಗೆ ಲಲಿತ್‌ಗೇಟ್, ವ್ಯಾಪಂ ಹಗರಣ ಕಾಣಿಸಲಿಲ್ಲವೇ: ನಿತೀಶ್ ಕುಮಾರ್

ಭ್ರಷ್ಟಾಚಾರದ ಹೇಳಿಕೆ ನೀಡುವ ಪ್ರಧಾನಿಗೆ ಲಲಿತ್‌ಗೇಟ್, ವ್ಯಾಪಂ ಹಗರಣ ಕಾಣಿಸಲಿಲ್ಲವೇ: ನಿತೀಶ್ ಕುಮಾರ್
ಪಾಟ್ನಾ , ಮಂಗಳವಾರ, 13 ಅಕ್ಟೋಬರ್ 2015 (21:32 IST)
ಚುನಾವಣೆಯಲ್ಲಿ ಸ್ಪರ್ಧಿಸಲು ಹಣ ಪಡೆಯುತ್ತಿರುವ ಜೆಡಿಯು ಮಾಜಿ ಸಚಿವನ ವಿಡಿಯೋ ಬಗ್ಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್, ಮೋದಿ ಯಾವತ್ತೂ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದವರಲ್ಲ ಎಂದು ಲೇವಡಿ ಮಾಡಿದರು.
 
ಬಿಹಾರ್‌ನಲ್ಲಿ ಬಿಜೆಪಿ ಸೋಲುತ್ತಿರುವುದನ್ನು ಕಂಡ ಮೋದಿ ಕೊನೆಗೂ ಧೈರ್ಯ ತೋರಿಸಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಲಲಿತ್ ಗೇಟ್ ಮತ್ತು ವ್ಯಾಪಂ ಹಗರಣ ನಡೆದಾಗ ಯಾಕೆ ಮೌನವಾಗಿದ್ದರು ಎಂದು ಗುಡುಗಿದ್ದಾರೆ.
 
ಬಿಜೆಪಿ ನಾಯಕರು ಭಾಗಿಯಾಗಿರುವ ಲಲಿತ್‌ಗೇಟ್, ವ್ಯಾಪಂ ಹಗರಣ ಸೇರಿದಂತೆ ಅನೇಕ ಹಗರಣಗಳು ಬಹಿರಂಗವಾಗಿದ್ದರೂ ಮೌನಧಾರಣೆ ಅನುಸರಿಸಿದ ಮೋದಿಗೆ ಇದೀಗ ಭ್ರಷ್ಟಾಚಾರದ ನೆನಪಾಗಿದೆಯೇ ಎಂದು ತಿರುಗೇಟು ನೀಡಿದರು.
 
ಜೆಡಿಯು ಸಚಿವ ಅವದೇಶ್ ಖುಶ್ವಾ ಲಂಚ ಸ್ವೀಕರಿಸುತ್ತಿರುವ ವಿಡಿಯೋ ಸಾರ್ವಜನಿಕರಿಗೆ ತೋರಿಸಿದ ಪ್ರಧಾನಿ, ಜೆಡಿಯು ನಾಯಕರಿಗೆ ನಾಚಿಕೆಯಾಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಿತೀಶ್ ಹೇಳಿಕೆ ಹೊರಬಿದ್ದಿದೆ.
 
ಲೋಕದ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯದ ವ್ಯಕ್ತಿಯಾದ ಪ್ರಧಾನಿ ಮೋದಿ ಇತರರಿಗೆ ಪಾಠ ಹೇಳುತ್ತಿದ್ದಾರೆ ಎಂದು ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಕಿಡಿಕಾರಿದ್ದಾರೆ.  

Share this Story:

Follow Webdunia kannada