Webdunia - Bharat's app for daily news and videos

Install App

ನಮ್ಮಪ್ಪ ಕಳ್ಳ : ವರದಕ್ಷಿಣೆ ತರಲಿಲ್ಲವೆಂದು ಹಣೆ ಮೇಲೆ ಹಚ್ಚೆ ಹಾಕಿಸಿದರು

Webdunia
ಮಂಗಳವಾರ, 28 ಜೂನ್ 2016 (13:59 IST)
ವರದಕ್ಷಿಣೆ ತಡೆಗಾಗಿ ಸರ್ಕಾರ ಎಷ್ಟೇ ಕ್ರಮಗಳನ್ನು, ಕಾನೂನನ್ನು ಜಾರಿಗೆ ತಂದರೂ ಆ ಭೂತ ಮಾತ್ರ ಇನ್ನು ನರ್ತನವಾಡುತ್ತಲೇ ಇದೆ. ಇದಕ್ಕೆ ಸಾಕ್ಷಿಯಾಗಿ ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಸಂಪೂರ್ಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಮಹಿಳೆಯನ್ನು ಮನಬಂದಂತೆ ಥಳಿಸಿ, ಮಾನಸಿಕ ಹಿಂಸೆ ನೀಡಿ, ಅತ್ಯಾಚಾರವೆಸಗಿದ್ದಲ್ಲೇ ಆಕೆಯ ಹಣೆಯ ಮೇಲೆ 'ನಮ್ಮಪ್ಪ ಕಳ್ಳ' ಎಂದು ಅಳಿಸಲಾಗದ ಹಚ್ಚೆ ಹಾಕಿಸಲಾಗಿದೆ. 
 
ಪೊಲೀಸರ ಪ್ರಕಾರ ಪೀಡಿತೆ ಅಲ್ವಾರ್ ಜಿಲ್ಲೆಯ ರೇನಿ ಗ್ರಾಮದ ಜಗನ್ನಾಥ್ ಎಂಬುವವರ ಜತೆ ಎರಡು ವರ್ಷದ ಹಿಂದೆ ಮದುವೆಯಾಗಿದ್ದಳು. ಮದುವೆಯಾಗಿ ಬಂದಾಗಿನಿಂದ ಆಕೆಯ ಗಂಡನ ಮನೆಯವರು 51,000 ಹಣ ತರುವಂತೆ ಹಿಂಸಿಸುತ್ತಿದ್ದರು. ಆದರೆ ತನ್ನ ತವರು ಮನೆಯವರಿಗೆ ಅದನ್ನು ವ್ಯವಸ್ಥೆ ಮಾಡಲಾಗಲಿಲ್ಲ ಎಂದಾಕೆ ಹೇಳಿದ್ದಾಳೆ. 
 
6 ತಿಂಗಳವರೆಗೆ ಆಕೆ ಎಲ್ಲವನ್ನು ಸಹಿಸಿಕೊಂಡಿದ್ದಳು. ಆದರೆ ದಿನಗಳೆದಂತೆ ಆಕೆಯ ಪರಿಸ್ಥಿತಿ ಕೈ ಮೀರಿ ಹೋಗತೊಡಗಿತು. ಕೊನೆಗೊಂದು ದಿನ ಅವರು ಆಕೆಯ ಮೇನೆ ರೇಪ್ ಮಾಡಿ ಟ್ಯಾಟೂ ಹಾಕಿಸಿ ಆಕೆಯ ಕೈಯ್ಯಿಂದಲೇ ಕರೆ ಮಾಡಿಸಿ ಅವಳಪ್ಪನನ್ನು ಕರೆಸಿದ್ದಾರೆ. ಮಗಳ ಸ್ಥಿತಿಯನ್ನು ನೋಡಿ ಆಘಾತಕ್ಕೀಡಾದ ಅಪ್ಪ ಈಗ ಆ ಹಚ್ಚೆಗಳನ್ನು ಅಳಿಸಿ ಹಾಕಲು ಪ್ರಯತ್ನ ನಡೆಸಿದ್ದಾನೆ.
 
ವರದಕ್ಷಿಣೆ ಹಿಂಸೆ ನೀಡುತ್ತಿದ್ದ ನನ್ನ ಗಂಡನ ಮನೆಯವರು ತವರಿಂದ ಹಣ ತರಲಿಲ್ಲವೆಂದು ನನ್ನ ಹಣೆ , ಕೈ, ಮೈಮೇಲೆಲ್ಲಾ 'ನಮ್ಮಪ್ಪ ಕಳ್ಳ' ಎಂದು ಹಚ್ಚೆ ಹಾಕಿಸಿದರು. ಅಷ್ಟೇ ಅಲ್ಲದೇ ಮೂವರು ಸಹೋದರರು ಸೇರಿ ಅತ್ಯಾಚಾರವೆಸಗಿದರು ಎಂದು ಜೈಪುರದ ಬಳಿಯ ಅಂಬರ್ ನಿವಾಸಿಯಾಗಿರುವ ಸುಮಾರು 25 ವರ್ಷದ ಮಹಿಳೆ ಪೊಲೀಸರಲ್ಲಿ ದೂರು ನೀಡಿದ್ದಾಳೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಾಯ್ಲೆಟ್‌ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮುಂದಿನ ಸುದ್ದಿ
Show comments