Webdunia - Bharat's app for daily news and videos

Install App

ಈ ಬಾರಿ ಗಣರಾಜ್ಯೋತ್ಸವ ಹೇಗಿರುತ್ತೆ? ಇಲ್ಲಿದೆ ಪೂರ್ಣ ಮಾಹಿತಿ

Webdunia
ಬುಧವಾರ, 19 ಜನವರಿ 2022 (10:30 IST)
ನವದೆಹಲಿ : ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಈ ವರ್ಷ ಹಲವು ಬದಲಾವಣೆಗಳೊಂದಿಗೆ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ.

ಇದೇ ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನ ಅರ್ಧ ಗಂಟೆ ತಡವಾಗಿ ಆರಂಭವಾಗಲಿದೆ. ಆ ಸಂದರ್ಭದಲ್ಲಿ ದೆಹಲಿಯ ಮಂಜು ಹೆಚ್ಚಿನ ಪ್ರಮಾಣದಲ್ಲಿ ಆವರಿಸಿರುತ್ತದೆ. ಹೀಗಾಗಿ ಪರೇಡ್ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾಮಾನ್ಯವಾಗಿ 10 ಗಂಟೆಗೆ ಆರಂಭವಾಗಬೇಕಿದ್ದ ಪರೇಡ್ ಅನ್ನು 10:30ಕ್ಕೆ ಆರಂಭಿಸಲಾಗುವುದು. 

10 ದೊಡ್ಡ ಎಲ್ಇಡಿ ಅಳವಡಿಕೆ

ಪಥಸಂಚಲನದಲ್ಲಿ ವೀಕ್ಷಕರಿಗೆ ಉತ್ತಮ ವೀಕ್ಷಣೆಗಾಗಿ 10 ದೊಡ್ಡ ಎಲ್ಇಡಿ ಪರದೆಗಳನ್ನು ರಾಜಪಥದಲ್ಲಿ ಅಳವಡಿಸಲಾಗುವುದು. ಆ ವೇಳೆ ಮಂಜು ಕವಿದ ವಾತಾವರಣ ಇರಲಿದೆ. ಪಥ ಸಂಚಲನ ವೀಕ್ಷಣೆಗಾಗಿ ಈ ಕ್ರಮವಹಿಸಲಾಗಿದೆ.

ಕಿರುಚಿತ್ರ ಪ್ರದರ್ಶನ

ಹಿಂದಿನ ವರ್ಷದ ಪರೇಡ್ನ ತುಣುಕುಗಳ ಸಂಯೋಜಿತ ಕ್ಯುರೇಟೆಡ್ ಚಲನಚಿತ್ರ, ಸಶಸ್ತ್ರ ಪಡೆಗಳ ಕಿರುಚಿತ್ರ ಮತ್ತು ಗಣರಾಜ್ಯೋತ್ಸವ 2022ರ ಪೂರ್ವದಲ್ಲಿ ವಿವಿಧ ಘಟನೆಗಳಿಗೆ ಸಂಬಂಧಿಸಿದ ಕಥೆಗಳ ವೀಡಿಯೋ ತುಣುಕನ್ನು ಮೆರವಣಿಗೆ ಪ್ರಾರಂಭವಾಗುವ ಮೊದಲು ಪ್ರದರ್ಶಿಸಲಾಗುವುದು. 

24,000 ಅತಿಥಿಗಳಿಗೆ ಮಾತ್ರ ಅವಕಾಶ

ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಈ ಬಾರಿ ಪಥಸಂಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇವಲ 24,000 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. 19,000 ಅತಿಥಿಗಳು ಆಹ್ವಾನಿತರಾಗಿರುತ್ತಾರೆ.

ಉಳಿದವರು ಸಾಮಾನ್ಯ ಜನರು ಯಾರು ಬೇಕಾದರೂ ಟಿಕೆಟ್ ಖರೀದಿಸಿ ಪರೇಡ್ ವೀಕ್ಷಣೆಗೆ ಪಾಲ್ಗೊಳ್ಳಬಹುದು. ಕಳೆದ ವರ್ಷ 25,000 ಹಾಗೂ 2020ರಲ್ಲಿ 1.25 ಲಕ್ಷ ಮಂದಿಗೆ ಪರೇಡ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಅತಿಥಿಗಳು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು.

ಹುತಾತ್ಮ ಸೈನಿಕರಿಗೆ ಪ್ರಧಾನಿ ಗೌರವ

ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸೈನಿಕರಿಗೆ ಪ್ರಧಾನಿ ಮೋದಿ ಅವರು ಗೌರವ ನಮನ ಸಲ್ಲಿಸಲಿದ್ದಾರೆ.

ಸಮಾರೋಪದಲ್ಲಿ ಸಾಂಪ್ರದಾಯಿಕ ಫ್ಲೈ-ಪಾಸ್ಟ್ನಲ್ಲಿ 75 ವಿಮಾನಗಳು ಭಾಗವಹಿಸಲಿವೆ. ವಿಂಟೇಜ್ ಹಾಗೂ ಆಧುನಿಕ ರಫೇಲ್, ಸುಖೋಯ್, ಜಾಗ್ವಾರ್, ಎಂಐ-17, ಸಾರಂಗ್, ಡಕೋಟಾ ಆಕಾಶದಲ್ಲಿ ಹಾರಾಡಲಿವೆ.

ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಳ್ಳಲು ಮಧ್ಯ ಏಷ್ಯಾದ ಅತಿಥಿಗಳನ್ನು ಆಹ್ವಾನಿಸುವ ಸಂಪ್ರದಾಯವಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಬಾರಿಯೂ ವಿದೇಶದಿಂದ ಮುಖ್ಯ ಅತಿಥಿ ಆಹ್ವಾನಿಸದಿರಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments