Webdunia - Bharat's app for daily news and videos

Install App

ವಾಟ್! ರೈತರ ಆತ್ಮಹತ್ಯೆಗೆ ದೆವ್ವಗಳೇ ಕಾರಣವೆಂದ ಮಧ್ಯಪ್ರದೇಶ ಸರಕಾರ

Webdunia
ಗುರುವಾರ, 21 ಜುಲೈ 2016 (12:00 IST)
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ತವರು ಜಿಲ್ಲೆ ಸೆಹೋರ್‌ನಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ 418 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ರೈತರು ಆತ್ಮಹತ್ಯೆಗೆ ಶರಣಾಗಲು ದೆವ್ವಗಳು ಕಾರಣವಾಗಿವೆ ಎಂದು ಸರಕಾರ ಹೇಳಿಕೆ ನೀಡಿದೆ.
 
ಆತ್ಮಹತ್ಯೆಗೆ ಶರಣಾದ ರೈತರ ಸಂಬಂಧಿಗಳು ತಮ್ಮ ಸಂಬಂಧಿಕರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಿವೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.
 
ಕಾಂಗ್ರೆಸ್ ಶಾಸಕ ಶೈಲೇಂದ್ರ ಪಟೇಲ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಗೃಹ ಸಚಿವ ಭೂಪೇಂದ್ರ ಸಿಂಗ್, ರೈತರ ಆತ್ಮಹತ್ಯೆಗೆ ದೆವ್ವಗಳು ಕಾರಣವೇ ಹೊರತು ಆರ್ಥಿಕ ಬಿಕ್ಕಟ್ಟಲ್ಲ ಎಂದು ಹೇಳಿದ್ದಾರೆ. 
 
ಮಧ್ಯಪ್ರದೇಶದಲ್ಲಿ ಯಾವೊಬ್ಬ ರೈತನು ಹಣಕಾಸಿನ ಬಿಕ್ಕಟ್ಟಿನಿಂದ ಸಾವನ್ನಪ್ಪಿಲ್ಲ. ರೈತರ ಆತ್ಮಹತ್ಯೆಗೆ ದೆವ್ವಗಳು ಕಾರಣವಾಗಿವೆ ಎನ್ನುವುದು ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳ ಅನಿಸಿಕೆಯಾಗಿವೆ ಎಂದು ತಿಳಿಸಿದ್ದಾರೆ.
 
ಗೃಹ ಸಚಿವ ಭೂಪೇಂದ್ರ ಸಿಂಗ್ ಉತ್ತರದಿಂದ ಆಘಾತಗೊಂಡ ಕಾಂಗ್ರೆಸ್ ಶಾಸಕ ಪಟೇಲ್, ನಿಮ್ಮ ಸರಕಾರ ದೆವ್ವಗಳನ್ನು ನಂಬುತ್ತದೆಯೇ ಎಂದು ತಿರುಗೇಟು ನೀಡಿದರು.
 
ಸದನ ನಗೆಗಡಲಲ್ಲಿ ಮುಳುಗಿರುವಂತೆಯೇ ಬಿಜೆಪಿ ಶಾಸಕ ಬಾಬುಲಾಲ್ ಗೌರ್, ದೆವ್ವಗಳನ್ನು ನಂಬುವಂತಹ ಸರಕಾರ ಹ್ಯಾಪಿನೆಸ್ ಡಿಪಾರ್ಟ್‌ಮೆಂಟ್ ತೆರೆಯಲು ಸಿದ್ದತೆ ನಡೆಸಿದೆ ತಮ್ಮದೇ ಪಕ್ಷದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 
 
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಇತ್ತೀಚೆಗೆ ಹ್ಯಾಪಿನೆಸ್ ಡಿಪಾರ್ಟ್‌ಮೆಂಟ್ ಸೃಷ್ಟಿಸುವ ಕುರಿತಂತೆ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು. 

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments