Webdunia - Bharat's app for daily news and videos

Install App

ಕುಸ್ತಿಪಟುವಿಗೆ ಪುಕ್ಕಟ್ಟೆ ಸಲಹೆ ನೀಡ ಹೋದ ಲಾಲು ಶಾಸಕನಿಗಾದ ಗತಿ ನೋಡಿ(ವಿಡಿಯೋ)

Webdunia
ಶನಿವಾರ, 12 ನವೆಂಬರ್ 2016 (11:34 IST)
ಕುಸ್ತಿಪಟುಗಳು ಸಾಮಾನ್ಯವಾಗಿ ಸಿಡುಕಿನ ಸ್ವಭಾವವನ್ನು ಹೊಂದಿರುತ್ತಾರೆ. ಆಖಾಡದಲ್ಲಿರುವಾಗ ಅವರನ್ನು ಕೆಣಕಿದರೆ, ಮುಂದಿರುವವರು ಯಾರು ಎಂಬುದರ ಕಡೆ ಕೂಡ ಅವರು ಗಮನ ನೀಡಲಾರರು. ಹೀಗಾಗಿ ಅಂತಹ ಪ್ರಮಾದವನ್ನು ಮಾಡುವ ಮುನ್ನ ಎಚ್ಚರವಿರಬೇಕು. ಆದರೆ ಪಾಪ ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಪಕ್ಷದ ಈ ಶಾಸಕನಿಗೆ ಅದು ಗೊತ್ತರಲಿಕ್ಕಿಲ್ಲ. ಅಥವಾ ತಾನು ಶಾಸಕ ಎಂಬ ದರ್ಪ ಆತನಲ್ಲಿತ್ತಿರಬೇಕು. ಹೀಗಾಗಿ ಕುಸ್ತಿಪಟುವನ್ನು ಕೆಣಕಿದ್ದಾನೆ. ಪರಿಣಾಮ? ಪರಿಣಾಮವೇನಾಯಿತು ಎಂದು ತಿಳಿಯಲು ಮುಂದೆ ಓದಿ ಮತ್ತು ವಿಡಿಯೋ ನೋಡಿ. 
ಭೋಜ್ಪುರ ಜಿಲ್ಲೆಯ 45ನೇ ಸಂಸ್ಥಾಪನಾ ದಿನದ ಸ್ಮರಣಾರ್ಥ ಅರಾದಲ್ಲಿ ಗುರುವಾರ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯ ನೋಡಲು ಬಂದಿದ್ದ ಸಂದೇಶ್ ವಿಧಾನಸಭಾ ಕ್ಷೇತ್ರದ ಶಾಸಕ ಅರುಣ್ ಯಾದವ್ ಪಂದ್ಯವನ್ನು ನೋಡುತ್ತ ಸುಮ್ಮನಿರದೆ 19 ವರ್ಷದ ಯುವ ಕುಸ್ತಿ ಪಟು ರಾಜ್ ಕುಮಾರ್ ಪಾಸ್ವಾನ್‌ನಿಗೆ ಹಾಗೆ ಮಾಡು ಹೀಗೆ ಮಾಡು ಎಂದು ಒಂದಾದ ಮೇಲೆ ಒಂದರಂತೆ ಪುಕ್ಕಟ್ಟೆ ಸಲಹೆ ನೀಡುತ್ತ ತಲೆ ನೋವು ತರಿಸಿದ್ದಾನೆ.
 
ಆಖಾಡದಲ್ಲಿದ್ದಾಗ ಶಾಸಕ ಕೆಣಕುತ್ತಿದ್ದುದು  ರಾಜ್ ಕುಮಾರ್‌ನ ಪಿತ್ತವನ್ನು ನೆತ್ತಿಗೇರಿಸಿದೆ. ಎಲ್ಲರೂ ನೋಡುತ್ತಿದ್ದಂತೆ ಅರುಣ್ ಆತನನ್ನು ಮೇಲಕೆತ್ತಿ ಕೆಳಕ್ಕೆ ಹಾಕಿ ನೀವು ಎಷ್ಟೇ ಪ್ರತಿಷ್ಠಿತರಾಗಿದ್ದರೂ ಒಬ್ಬ ಕುಸ್ತಿಪಟುವನ್ನು ಕೆಣಕಬೇಡಿ ಎಂಬ ಖಡಕ್ ಸಂದೇಶವನ್ನು ನೀಡಿದ್ದಾನೆ.
 
ಏಕಾಏಕಿ ತಮ್ಮನ್ನು ಎತ್ತಿ ಬೀಸಾಕಿದ್ದರಿಂದ ಮುಖಭಂಗಕ್ಕೆ ಒಳಗಾದ ಶಾಸಕರು ಮೊಂಡು ಧೈರ್ಯ ತೋರುತ್ತ ತೊಡೆತಟ್ಟಿ ರಾಜ್ ಕುಮಾರ್ ವಿರುದ್ಧ ಕುಸ್ತಿಗಿಳಿಯಲು ಪ್ರಯತ್ನಿಸಿದರು. ಅವರ ಅಂಗರಕ್ಷಕರು ಮತ್ತು ಬೆಂಬಲಿಗರು ಕೂಡ ಆಖಾಡಕ್ಕಿಳಿದರು. ಆದರೆ ಆಯೋಜಕರು ಅವರನ್ನು ತಡೆದು ಮತ್ತೊಮ್ಮೆ ಅವರ ಮುಖಭಂಗವಾಗುವುದನ್ನು ತಪ್ಪಿಸಿದ್ದಾರೆ. 
 
'ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣು ಆಗಲಿಲ್ಲ', ಎನ್ನುವಂತೆ ಅಪಮಾನವಾದರೂ ಅದನ್ನು ತೋರ್ಪಡಿಸದ ಶಾಸಕ, ನನ್ನ ಕಾಲದಲ್ಲಿ (1981- 1990) ನಾನು ಅತ್ಯುತ್ತಮ ಕುಸ್ತಿಪಟುವಾಗಿದ್ದೆ. ನಾನು ಆತನಿಗೆ ಕೆಲವು ಕುಸ್ತಿ ನಡೆಗಳನ್ನು ತೋರಿಸುತ್ತಿದ್ದೆ. ಎದುರಾಳಿಯನ್ನು ಹೇಗೆ ಉರುಳಿಸುವುದು ಎಂಬುದನ್ನು ತೋರಿಸುವಾಗ ಸಮತೋಲನ ತಪ್ಪಿ ಬಿದ್ದುಬಿಟ್ಟೆ. ಸುದ್ದಿವಾಹಿನಿಗಳು ಸಂಪೂರ್ಣ ಪ್ರಸಂಗವನ್ನು ತಿರುಚಿ ತೋರಿಸಿದವು ಎಂದು ತಾವು ಮಣ್ಣುಮುಕ್ಕಿಯೇ ಇಲ್ಲ ಎಂದು ವಾದಿಸಿದ್ದಾರೆ
 
ಈ ಸುದ್ದಿ ನೀತಿಪಾಠ: ನೀವು ಶಾಸಕರಿದ್ದರೂ ಸಹಿ ಕುಸ್ತಿಪಟುವನ್ನು ಕೆಣಕಬೇಡಿ
ಕುಸ್ತಿಪಟುವಿಗೆ ಪುಕ್ಕಟ್ಟೆ ಸಲಹೆ ನೀಡ ಹೋದ ಲಾಲು ಶಾಸಕನಿಗಾದ ಗತಿ ನೋಡಿ(ವಿಡಿಯೋ)
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ

ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯದಲ್ಲಿ ಚೇತರಿಕೆ: ಮಹಿಳೆಗೆ ಒತ್ತಡ, ದೂರು

ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿಕೆ

ಮುಂದಿನ ಸುದ್ದಿ
Show comments