Webdunia - Bharat's app for daily news and videos

Install App

ಸರತಿ ಸಾಲಿನಿಂದ ಜಂಪ್ ಮಾಡಲು ಹೋದ ಚಿರಂಜೀವಿಗೆ ಮತದಾರ ತರಾಟೆ

Webdunia
ಬುಧವಾರ, 30 ಏಪ್ರಿಲ್ 2014 (19:33 IST)
ಮತವನ್ನು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರನ್ನು ಅನುಸರಿಸದೇ, ಅವರನ್ನು ದಾಟಿ ಮುಂದೆ ಹೋದ ನಟ, ರಾಜಕಾರಣಿ ಚಿರಂಜೀವಿಯನ್ನು ತಡೆದು ನಿಲ್ಲಿಸಿದ ಮತದಾರನೊಬ್ಬ  ನಿಮಗೆ ವಿಶೇಷ ಸತ್ಕಾರ ಕೊಡಬೇಕಾ?  ನೀವು ಕೇಂದ್ರ ಮಂತ್ರಿಯಾಗಿರಬಹುದು. ಆದರೆ ನೀವು ಹಿರಿಯ ನಾಗರಿಕರಲ್ಲ. ಸಾಲಿನಲ್ಲಿ ನಿಲ್ಲದೇ, ನಿಮ್ಮ ಕುಟುಂಬದ ಜತೆ ನೀವು ಸಾಲನ್ನು ದಾಟಿ ಮುಂದೆ ಹೋಗುವ ಹಾಗಿಲ್ಲ ಎಂದು ತಾಕೀತು ನೀಡಿದರು.
 
ಕಾಂಗ್ರೆಸ್ ನಾಯಕ ಚಿರಂಜೀವಿ ತನ್ನ ಪತ್ನಿ, ಮಗ ಮತ್ತು ಮಗಳ ಜತೆ ಮತ ಚಲಾಯಿಸಲು ಬಂದಿದ್ದರು.  ಈ ಮಾತಿಗೆ ಪ್ರತಿಯಾಗಿ ಅಲ್ಲಿ ನಿಂತಿದ್ದ ಇತರ ಮತದಾರರು ಚಪ್ಪಾಳೆ ತಟ್ಟುವುದರ ಮೂಲಕ ನಟನಿಗೆ ಕಿರಿಕಿರಿ ಉಂಟು ಮಾಡಿದರು. 
 
ತನಗೆ ತಾಕೀತು ಮಾಡಿದ ಮತದಾರನ ಬಳಿ ಹೋದ ಅವರು "ನಾನು ಸರತಿ ಸಾಲನ್ನು ದಾಟಿ ಮುಂದೆ ಹೋಗಲಿಲ್ಲ. ಕೇವಲ ಮತ ಚಲಾಯಿಸಲು ನಾನು ಲಂಡನ್‌ನಿಂದ ಇಲ್ಲಿಗೆ ಬಂದಿದ್ದೇನೆ. ಮತದಾರರ ಹೆಸರಲ್ಲಿ ನನ್ನ ಹೆಸರು ಇದೆಯೇ ಎಂದು ಪರೀಕ್ಷಿಸಲು ಸಾಲನ್ನು ಬಿಟ್ಟು ಒಳ ಹೊರಟಿದ್ದೆ" ಎಂದು ಸ್ಪಷ್ಟಪಡಿಸಿದರು.ಮಾಧ್ಯಮಗಳು 'ಓವರ್ ಎಕ್ಟಿಂಗ್' ಮಾಡುತ್ತಿವೆ ಎಂದು ಮೆಗಾಸ್ಟಾರ್ ಚಿರಂಜೀವಿ ಆರೋಪಿಸಿದರು.    
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments