Webdunia - Bharat's app for daily news and videos

Install App

ಕಾಲು ನೋವಿತ್ತು, ಭದ್ರತಾ ಅಧಿಕಾರಿ ನನ್ನ ಮಗನಂತೆ ಎನ್ನುತ್ತಿದ್ದಾನೆ ವಿಐಪಿ ಸಚಿವ

Webdunia
ಬುಧವಾರ, 17 ಆಗಸ್ಟ್ 2016 (11:44 IST)
ಸ್ವಾತಂತ್ರ್ಯೋತ್ಸವ ದಿನದಂದು ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡು, ಖಂಡನೆಗೊಳಗಾದಾಗ 'ನಾನು ವಿಐಪಿ' ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಒಡಿಶಾ ಸಚಿವ ಜೋಗೇಂದ್ರ ಬೆಹೆರಾ ಈಗ ರಾಗ ಬದಲಿಸಿದ್ದಾರೆ. ನನಗೆ ಆರೋಗ್ಯ ಸಮಸ್ಯೆ ಇದ್ದು, ಬಾಗಲು ಕಷ್ಟವಾಗುತ್ತಿದ್ದರಿಂದ ಭದ್ರತಾ ಅಧಿಕಾರಿ ಬಳಿ ಶೂ ಲೇಸ್ ಕಟ್ಟಿಕೊಂಡೆ ಎಂದು ಅವರು ಹೊಸ ಸಮರ್ಥನೆಯನ್ನು ನೀಡಿದ್ದಾರೆ.

ನನ್ನ ಎಡ ಕಾಲು ಬಹಳ ನೋವಾಗುತ್ತಿತ್ತು. ಬಾಗಲು ಸಾಧ್ಯವಾಗುತ್ತಿರಲಿಲ್ಲ . ಹೀಗಾಗಿ ಭದ್ರತಾ ಅಧಿಕಾರಿ ತಾವಾಗಿಯೇ ಶೂ ಲೇಸ್ ಕಟ್ಟಿದರು. ಅವರು ನನ್ನ ಮಗನಂತೆ ಎಂದು ಸಚಿವ ಜೋಗೇಂದ್ರ ಬೆಹೆರಾ ಹೇಳಿದ್ದಾರೆ. 
 
ನಾನು ಏಮ್ಸ್ ವೈದ್ಯರನ್ನು ಸಂಪರ್ಕಿಸಿದ್ದಕ್ಕೆ ಪುರಾವೆಯಾಗಿ ಔಷಧಿಸೂಚಿಯನ್ನು ತೋರಿಸಲೇ ಎಂದು ಅವರು ಪ್ರಶ್ನಿಸಿದ್ದಾರೆ. 
 
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಳ್ಳುವುದರ ಮೂಲಕ ಓಡಿಶಾದ ಸಚಿವ ಜೋಗೇಂದ್ರ ಬೆಹೆರಾ ಹೊಸ ವಿವಾದವನ್ನು ಮೈಗೆಳೆದುಕೊಂಡಿದ್ದರು. 
 
ಸೋಮವಾರ ಕಿಂಯೋಜರ್ ಜಿಲ್ಲಾಡಳಿತದ ಮುಂಭಾಗದಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಬೆಹೆರಾ ಮುಖ್ಯ ಅತಿಥಿಗಳಾಗಿದ್ದರು. ಧ್ವಜಾರೋಹಣವನ್ನು ಮಾಡಿದ ಬಳಿಕ ಕೆಳಗೆ ಬಿಚ್ಚಿಟ್ಟಿದ್ದ ಶೂ ತೊಟ್ಟುಕೊಂಡ ಸಚಿವರು ಭದ್ರತಾ ಅಧಿಕಾರಿಯಿಂದ ಲೇಸ್ ಕಟ್ಟಿಸಿಕೊಂಡಿದ್ದರು.
 
ಈ ದೃಶ್ಯಾವಳಿಯನ್ನು ಸ್ಥಳೀಯ ವಾಹಿನಿಗಳು ಪ್ರಸಾರ ಮಾಡಿದಾಗ ಪ್ರತಿಕ್ರಿಯಿಸಿದ್ದ ಸಚಿವರು, ನಾನು ವಿಐಪಿ, ಧ್ವಜಾರೋಹಣ ಮಾಡಿದ್ದೇನೆ. ಇದನ್ನು  ಭದ್ರತಾ ಅಧಿಕಾರಿ ಮಾಡಿಲ್ಲ ಎಂದು ಅಸಂಬದ್ಧವಾಗಿ ಉತ್ತರಿಸಿದ್ದರು. 
 
ಸಚಿವರ ಈ ವರ್ತನೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pehalgam Attack: ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೊನೆಯ ವಿಡಿಯೋ ವೈರಲ್: ಪತ್ನಿ ಜೊತೆ ಖುಷಿಯಾಗಿದ್ದ ಕೊನೆಯ ಕ್ಷಣ

Pahalgam Terror Attack:ಮೃತ ಕನ್ನಡಿಗರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

Terror Attack: ಪ್ರವಾಸಿಗರ ಮೇಲಿನ ದಾಳಿಗೆ ರೊಚ್ಚಿಗೆದ್ದ ಶಾರುಖ್ ಖಾನ್‌, ಪೋಸ್ಟ್ ಮಾಡಿ ಹೀಗಂದ್ರು

Terror Attack, 40ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

Terror Attack: ಉಗ್ರರ ವಿರುದ್ಧ ರಾಜಿಯಿಲ್ಲದ ನಿರ್ಧಾರ ಕೈಗೊಳ್ಳುತ್ತೇವೆ, ರಾಜನಾಥ್ ಸಿಂಗ್‌ ತಿರುಗೇಟು

ಮುಂದಿನ ಸುದ್ದಿ
Show comments