Webdunia - Bharat's app for daily news and videos

Install App

ಸೊಸೆ ಕೊಲೆಗೈದವರ ಜೀವಂತ ದಹನಕ್ಕೆ ಯತ್ನ

Webdunia
ಶುಕ್ರವಾರ, 28 ಆಗಸ್ಟ್ 2015 (09:45 IST)
ಸೊಸೆಯನ್ನು ಹತ್ಯೆಗೈದಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿರುವ ದಂಪತಿಗಳನ್ನು ಗ್ರಾಮಸ್ಥರೆಲ್ಲ ಸೇರಿ  ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ಘಟನೆ ಜಾರ್ಖಂಡ್‌‌‌ನಲ್ಲಿ ಬೆಳಕಿಗೆ ಬಂದಿದೆ. 
 
ಹಾಟಿಯಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾಗಿದ್ದಾಳೆ ಎನ್ನಲಾದ ಸೊಸೆ ತನ್ನ ಗಂಡನ ತಂದೆಯ ನಡವಳಿಕೆ ಸರಿ ಇಲ್ಲ ಎಂದು ಗ್ರಾಮದ ಹಿರಿಯರಲ್ಲಿ ದೂರಿದ್ದಳು. ಈ ಹಿನ್ನೆಲೆಯಲ್ಲಿ ಪಂಚಾಯತಿ ಕರೆಯಲಾಗಿತ್ತು. ಆದರೆ ಗ್ರಾಮಸ್ಥರು ಸಭೆ ಸೇರಿ ದೂರಿನ ಕುರಿತು ಚರ್ಚಿಸುವ ಮುನ್ನವೇ ಸೊಸೆ ಕೊಲೆಯಾಗಿ ಹೋಗಿದ್ದಳು. ಆಕೆಯನ್ನು ಮಾವ ಜಯರಾಂ ಮಹತೋ ಮತ್ತು ಅತ್ತೆ ಸೇರಿ ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಗ್ರಾಮದಲ್ಲೆಲ್ಲ ಹರಡಿತು.
 
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ದಂಪತಿಗಳನ್ನು ಅವರ ಮನೆಯಲ್ಲಿ ಕೂಡಿ ಹಾಕಿ ಮನೆಗೆ ಬೆಂಕಿ ಇಟ್ಟಿದ್ದಾರೆ. ಆದರೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ದಂಪತಿಗಳನ್ನು ರಕ್ಷಿಸಿದ್ದು ಅವರಿಬ್ಬರನ್ನು ಬಂಧಿಸಿದ್ದಾರೆ. 
 
ಆರೋಪಿ ಜಯರಾಂ ಮೇಲೆ ಮೇಲೆ ತನ್ನ ಮಗನನ್ನು ಕೊಂದ ಆರೋಪವು ಕೂಡ ಇದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments