Webdunia - Bharat's app for daily news and videos

Install App

ಚೆನ್ನೈ ಕರಾವಳಿ ದಾಟಿ ಆಂಧ್ರದತ್ತ ವಾರ್ಧಾ: ತಗ್ಗಿದ ಗಾಳಿ ವೇಗ

Webdunia
ಸೋಮವಾರ, 12 ಡಿಸೆಂಬರ್ 2016 (16:17 IST)
ವಾರ್ಧಾ ಚಂಡಮಾರುತ ತಮಿಳುನಾಡು ಕರಾವಳಿ ತೀರವನ್ನು ದಾಟಿ ಆಂಧ್ರದ ಕರಾವಳಿಯತ್ತ ಸಾಗಿದ್ದು ಗಾಳಿಯ ವೇಗ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಗಾಳಿಯ ವೇಗ ತಗ್ಗುತ್ತಿದ್ದಂತೆ ವಾಹನಗಳು ನಿಧಾನವಾಗಿ ರಸ್ತೆಗಿಳಿಯುತ್ತಿವೆ.


ಇಲ್ಲಿಯವರೆಗೆ 110ಕೀಲೋಮೀಟರ್ ವೇಗದಲ್ಲಿ ಬೀಸುತ್ತಿದ್ದ ಗಾಳಿ, ಆಂಧ್ರದತ್ತ ಸಾಗುತ್ತಿದ್ದಂತೆ 40ಕೀಲೋಮೀಟರ್‌ಗೆ ತಗ್ಗಿದೆ. 
 
ಮುಂದಿನ 12 ಗಂಟೆ ಗಾಳಿಯ ವೇಗ ದಿಢೀರ್ ಹೆಚ್ಚುವ  ಸಾಧ್ಯತೆಗಳಿದ್ದು ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆ ನೀಡಲಾಗಿದೆ. 
 
ಮುಂಜಾನೆಯಿಂದ ಅಬ್ಬರಿಸಿದ ಮಳೆ-ಗಾಳಿಯ ಪರಿಣಾಮ ಚೆನ್ನೈ ಮಹಾನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ನಗರದಲ್ಲಿ 4,000 ಮರಗಳು ಧರೆಗುರುಳಿವೆ. ಮರಗಳಡಿ ನಿಲ್ಲಿಸಲಾಗಿದ್ದ ಸಾವಿರಾರು ವಾಹನಗಳು ಜಖಂಗೊಂಡಿವೆ. ಗಿಂಡಿ ಕೈಗಾರಿಕಾ ಪ್ರದೇಶ ಸೇರಿದಂತೆ ಚೆನ್ನೈನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ನೂರಾರು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments