Select Your Language

Notifications

webdunia
webdunia
webdunia
webdunia

ಯುಪಿ ಭಾರತದಲ್ಲಿಯೇ ಅತ್ಯಂತ ಅಸುರಕ್ಷಿತ ಪ್ರದೇಶ: ಉಮಾ ಭಾರತಿ

ಯುಪಿ ಭಾರತದಲ್ಲಿಯೇ ಅತ್ಯಂತ ಅಸುರಕ್ಷಿತ ಪ್ರದೇಶ: ಉಮಾ ಭಾರತಿ
ಲಖನೌ , ಬುಧವಾರ, 22 ಜೂನ್ 2016 (17:42 IST)
ಉತ್ತರ ಪ್ರದೇಶ ದೇಶದಲ್ಲಿಯೇ 'ಅತ್ಯಂತ ಅಸುರಕ್ಷಿತ ಪ್ರದೇಶ' ಎಂದು ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿ ಹೇಳಿದ್ದಾರೆ.

ಉತ್ತರ ಪ್ರದೇಶ ದೇಶದಲ್ಲಿಯೇ ಅತ್ಯಂತ ಅಸುರಕ್ಷಿತ ಪ್ರದೇಶ. ಇಲ್ಲಿಂದ ಜನರು ವಲಸೆ ಹೋಗುತ್ತಿದ್ದಾರೆ. ಕೆಲವೆಡೆ ಜಾತೀಯತೆ, ಕೆಲವೆಡೆ ಕೋಮುವಾದ ಮತ್ತೆ ಕೆಲವೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟ ಕಾರಣಕ್ಕೆ ವಲಸೆ ಹೋಗುವುದನ್ನು ಕಾಣುತ್ತೇವೆ. ಜಮ್ಮು ಮತ್ತು ಕಾಶ್ಮೀರಕ್ಕಿಂತ ಹೆಚ್ಚು ಅಸುರಕ್ಷತಾ ಭಾವನೆ ಇಲ್ಲಿದೆ ಎಂದು ಕೇಂದ್ರ ಸಚಿವೆ ಗುಡುಗಿದ್ದಾರೆ.
 
ಕಾನೂನು ಸುವ್ಯವಸ್ಥೆ ಹದಗೆಟ್ಟ ಕಾರಣಕ್ಕೆ ಉತ್ತರ ಪ್ರದೇಶದ ಅನೇಕ ಹಳ್ಳಿ ಮತ್ತು ನಗದ ಜನರು ವಲಸೆ ಹೋಗುತ್ತಿದ್ದಾರೆ. ಕೈರಾನ ಅದಕ್ಕೊಂದು ಕೆಟ್ಟ ಉದಾಹರಣೆ ಎಂದು ಅವರು ಹೇಳಿದ್ದಾರೆ. 
 
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ರಾಜ್ಯ ಸಭಾ ಸದಸ್ಯ ಓಂ ಮಾಥುರ್ ಅವರ ನಿವಾಸಕ್ಕೆ ಭೇಟಿ ನೀಡಿದ ಉಮಾ ಭಾರತಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಜೆಡಿಎಸ್ ಪಕ್ಷದ ಶಾಸಕನಲ್ಲ: ಎಚ್.ಸಿ ಬಾಲಕೃಷ್ಣ