Select Your Language

Notifications

webdunia
webdunia
webdunia
webdunia

ಪುನರ್ಜನ್ಮದ ಕಥೆ ಇದು

ಪುನರ್ಜನ್ಮದ ಕಥೆ ಇದು
ಮೊರಾದಾಬಾದ್ , ಸೋಮವಾರ, 27 ಜೂನ್ 2016 (11:06 IST)
ಪುನರ್ಜನ್ಮದ ಸಿನಿಮಾಗಳು ಸಾಕಷ್ಟು ಬಂದು ಹೋಗಿವೆ. ಕೆಲವರು ಪುನರ್ಜನ್ಮವನ್ನು ನಂಬುತ್ತಾರೆ, ಬಹಳಷ್ಟು ಜನ ಇದನ್ನು ನಂಬಲಾರರು. ಹಿಂದೂ ಧರ್ಮದ ಪ್ರಕಾರ ಆತ್ಮ ದೇಹವನ್ನು ತೊರೆದ ಮೇಲೆ ಮತ್ತೊಂದು ಜನ್ಮವನ್ನು ಪಡೆದುಕೊಳ್ಳುತ್ತದೆ. ಸತ್ಯವೇನೇ ಇರಲಿ. ಮೊರಾದಾಬಾದ್ ನಿವಾಸಿ ಬಾಲಕನೊಬ್ಬ ಕಳೆದ ಜನ್ಮದಲ್ಲಿ ತನ್ನ ಕೊಲೆಯಾಗಿತ್ತು ಎನ್ನುತ್ತಿದ್ದು ಬಹಳ ಕುತೂಹಲಕ್ಕೆ ಎಡೆ ಮಾಡಿದೆ. 

ತಾರಾಪುರ ಎಂಬ ಗ್ರಾಮದಲ್ಲಿ ವಾಸವಾಗಿರುವ ಬಾಲಕ ರಾಜೇಶ್ ಎಂಬ ನಾಲ್ಕು ವರ್ಷದ ಬಾಲಕ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ ತನ್ನ ಹಳೆಯ ಜನ್ಮದ ಕಥೆಯನ್ನು ಹೇಳತೊಡಗಿದ್ದಾನೆ. ನಾನು ರಾಮ್ಪುರ್ ಜಿಲ್ಲೆಯ ಖರ್ಸೋಲ್ ಗ್ರಾಮದ ವಾಸಿಯಾಗಿದ್ದು ಪಪ್ಪು ಎಂಬುದು ನನ್ನ ಹೆಸರಾಗಿತ್ತು. ನನಗೆ 35 ವರ್ಷವಾಗಿದ್ದಾಗ (2010ರಲ್ಲಿ) ಸೋದರ ಸಂಬಂಧಿ ರಾಕೇಶ್ ಎಂಬಾತ ನನ್ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಎಂದಾತ ಹೇಳುತ್ತಾನೆ.
 
ಆತ ಹೇಳಿದ ಸ್ಥಳಕ್ಕೆ ಕರೆದುಕೊಂಡ ಹೋದಾಗ ಈ ಜನ್ಮದ ತಂದೆ-ತಾಯಿಗಾತ ತನ್ನ ಕೊಲೆಯಾದ ಜಾಗವನ್ನು ತೋರಿಸಿದ್ದಾನೆ. ಮೊಬೈಲ್ ಉಪಾಹಾರ ಅಂಗಡಿಯೊಂದರ ಮುಂದೆ ನಿಂತು ಅದರ ಮಾಲೀಕನನ್ನು ತನ್ನ ಹಳೆಯ ಜನ್ಮದ ತಂದೆ ಎಂದು ಗುರುತಿಸಿದ್ದಾನೆ.
 
ಪತ್ನಿ ಸೇರಿದಂತೆ ತನ್ನ ಹಳೆಯ ಜನ್ಮದ ಇತರ ಸಂಬಂಧಿಗಳನ್ನು ಸಹ ಆತ ಗುರುತಿಸುತ್ತಾನೆ.
 
ಆಸ್ತಿ ವಿಚಾರದಲ್ಲಿ ತಮ್ಮ ಮಗ ಪಪ್ಪುನನ್ನು ಆತನ ಸಹೋದರ ಸಂಬಂಧಿ ರಾಕೇಶ್ ಗುಂಡಿಟ್ಟು ಕೊಂದಿದ್ದ ಎಂಬುದನ್ನು ಪಪ್ಪುವಿನ ಪೋಷಕರು ಒಪ್ಪಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮನೆಗೆ ಹಿಂತಿರುಗಿಲ್ಲವೆಂದು ಈತ ಮಾಡಿದ್ದೇನು ಗೊತ್ತಾ?