Webdunia - Bharat's app for daily news and videos

Install App

ಬೀಭತ್ಸ: ಅತ್ಯಾಚಾರಿಯ ವಿರುದ್ಧ ಪುಟ್ಟ ಬಾಲಕಿ ಸೇಡು ತೀರಿಸಿಕೊಂಡಿದ್ದು ಹೇಗೆ ಗೊತ್ತಾ?

Webdunia
ಶುಕ್ರವಾರ, 23 ಅಕ್ಟೋಬರ್ 2015 (10:43 IST)
ಪುಟ್ಟ ಬಾಲಕಿಯೊಬ್ಬಳು ತನ್ನ ಮೇಲೆ ಅತ್ಯಾಚಾರಗೈದವನ ವಿರುದ್ಧ ಭಯಾನಕವಾಗಿ ಸೇಡು ತೀರಿಸಿಕೊಂಡು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದಾಳೆ. ಉತ್ತರ ಪ್ರದೇಶದ ಖೇರ್‌ನಲ್ಲಿ ಈ ಘಟನೆ ನಡೆದಿದೆ.ಅತ್ಯಾಚಾರಿಯ ಮೇಲಿನ ಸಿಟ್ಟಿಗೆ ಆತನ ಪುಟ್ಟ ಮಗುವಿನ ತಲೆ ಕಡಿದು ಸಾಯಿಸಲಾಗಿದ್ದು, ತಂದೆ ಮಾಡಿದ ತಪ್ಪಿಗೆ ಪುಟ್ಟ ಹಸುಳೆಯೊಂದು ಅಮಾನುಷವಾಗಿ ಹತ್ಯೆಗೀಡಾಗುವಂತಾಗಿದೆ.

ಕಳೆದ ಮಂಗಳವಾರ ಸಂಜೆ ಐದು ವರ್ಷದ ಬಾಲಕ ಅಮಿತ್ ತಮ್ಮ ಮನೆಯ ಮುಂದೆ ಆಟವಾಡುತ್ತಿದ್ದ. ಆ ಸಂದರ್ಭದಲ್ಲಿ ಬಾಲಕಿ ತಿಂಡಿ ಕೊಡಿಸುವ ಆಮಿಷ ಒಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಲೆ ಕಡಿದಿದ್ದಾಳೆ. ಅಷ್ಟೇ ಅಲ್ಲದೆ ಇಟ್ಟಿಗೆಯಿಂದ ಬಾಲಕನ ದೇಹವನ್ನು ಜಜ್ಜಿ ಪ್ಲಾಸ್ಟಿಕ್ ಕವರ್‌ನಲ್ಲಿ ತುಂಬಿ ಬೆಂಕಿ ಹಚ್ಚಿದ್ದಾಳೆ ಎಂದು  ಖೈರ್ ಪೊಲೀಸ್ ಠಾಣಾಧಿಕಾರಿ ರಾಜವೀರ್ ಸಿಂಗ್ ತಿಳಿಸಿದ್ದಾರೆ. 
 
ಅರ್ಧ ಸುಟ್ಟ ಮಗುವಿನ ದೇಹವನ್ನು ನಾಯಿಗಳು ಮರುದಿನ ಎಳೆಯುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ.
 
ತಮ್ಮ ಮಗನನ್ನು ಕೊನೆಯ ಬಾರಿಗೆ ಆರೋಪಿ ಬಾಲಕಿಯ ಜತೆಗೆ ನೋಡಿದ್ದಾಗಿ ಪೋಷಕರು ತಿಳಿಸಲಾಗಿ ಆಕೆಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
 
ಆ ಸಂದರ್ಭದಲ್ಲಿ ಬಾಲಕಿ ತನ್ನ ತಪ್ಪೊಪ್ಪಿಕೊಂಡಿದ್ದು, ಬಾಲಕನ ತಂದೆ ರಿಂಕುವಿಗೆ ತಾನು ವೈಟ್ನರ್‌ಗೆ ಅಡಿಕ್ಟ್ ಆಗಿರುವುದು ಗೊತ್ತಿತ್ತು. ಅದನ್ನು ದುರ್ಬಳಕೆ ಮಾಡಿಕೊಂಡ ಆತ ವೈಟ್ನರ್ ನೀಡಿ ಅಮಲೇರಿದಾಗ ಅತ್ಯಾಚಾರವೆಸಗಿದ್ದಾನೆ. ಆ ಸೇಡನ್ನು ತೀರಿಸಿಕೊಳ್ಳಲು ತಾನು ಈ ಕೃತ್ಯವೆಸಗಿದ್ದೇನೆ ಎಂದು ಬಾಯ್ಬಿಟ್ಟಿದ್ದಾಳೆ. 
 
ಸದ್ಯ ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಮೃತ ಬಾಲಕನ ತಂದೆಯ ವಿರುದ್ಧ ಸಹ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಸ್ಥಳೀಯರು ಈ ಘಟನೆಯಿಂದ ಬೆಚ್ಚಿಬಿದ್ದಿದ್ದು, ಘಟನೆಯಲ್ಲಿ ಮಂತ್ರವಾದಿಯ ಕೈವಾಡವಿರಬೇಕೆಂದು ಅನುಮಾನ ವ್ಯಕ್ತ ಪಡಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments