Webdunia - Bharat's app for daily news and videos

Install App

ಉಗ್ರರಿಂದ ಬಿಜೆಪಿ ನಾಯಕನ ಪುತ್ರನ ಅಪಹರಣ

Webdunia
ಮಂಗಳವಾರ, 23 ಆಗಸ್ಟ್ 2016 (10:22 IST)
ಅರುಣಾಚಲಪ್ರದೇಶದ ತಿನ್ ಸುಕಿಯಾ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರತ್ನೇಶ್ವರ್ ಮೊರಾನ್ ಅವರ ಪುತ್ರ, ಕುಲ್ದೀಪ್ ಮೊರಾನ್‌(27)ನನ್ನು ಶಂಕಿತ ಉಲ್ಫಾ ಉಗ್ರರು ಅಪಹರಿಸಿದ್ದಾರೆ. ಕುಲ್ದೀಪ್ ಅಂಕಲ್ ಕೂಡ ಶಾಸಕರಾಗಿದ್ದಾರೆ.

ಆಗಸ್ಟ್ 1 ರಂದು ನಾಪೊಂಗ್ ಪ್ರದೇಶದಿಂದ ಕುಲ್ದೀಪ್‌ನನ್ನು ಅಪಹರಿಸಲಾಗಿತ್ತು. ಆತನ ಬಿಡುಗಡೆಗೆ ಉಗ್ರರು 1 ಕೋಟಿ ರೂಪಾಯಿ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
 
ಪ್ರಥಮ ಬಾರಿ ಈ ಉಲ್ಫಾ ಉಗ್ರರು ಐಸಿಸ್ ಶೈಲಿಯ ಆಘಾತಕಾರಿ ವಿಡಿಯೋವೊಂದನ್ನು ಮಾಧ್ಯಮ ಕಚೇರಿಗೆ ಕಳುಹಿಸಿದ್ದಾರೆ. ಅಪಹೃತ ಯುವಕ ಬಿಡುಗಡೆಗಾಗಿ ಗೋಗರೆಯುತ್ತಿರುವ, ಆತನ ಸುತ್ತಮುತ್ತ ಗನ್ ಹಿಡಿದುಕೊಂಡು ಐವರು ಮುಸುಕುಧಾರಿ ಉಗ್ರರು ನಿಂತಿರುವುದು ಆ ವಿಡಿಯೋದಲ್ಲಿದೆ.
 
ಹಸಿರು ಟಿ- ಶರ್ಟ್ ಧರಿಸಿರುವ ಕುಲ್ದೀಪ್ ತನ್ನ ಪೋಷಕರು, ಅಂಕಲ್ ಮತ್ತು ಸಿಎಂ ಸರ್ಬಾನಂದ ಸೋನೋವಾಲ್ ಜತೆಯಲ್ಲಿ ನನ್ನನ್ನು ಬಿಡುಗಡೆಗೊಳಿಸಿ ಎಂದು ಅಳುತ್ತಿದ್ದಾನೆ. ನನ್ನ ಆರೋಗ್ಯ ಕೆಟ್ಟಿದೆ. ಹಣ ಕೊಟ್ಟು ನನ್ನನ್ನು ಬಿಡುಗಡೆ ಮಾಡಿ. ಅವರು ನನ್ನನ್ನು ಕೊಲ್ಲುತ್ತಾರೆ ಎಂದಾತ ಗೋಗರೆಯುತ್ತಿದ್ದಾನೆ.
 
ಮಾನವೀಯ ನೆಲೆಯಲ್ಲಿ ಆ ಹುಡುಗನನ್ನು ಬಿಡುಗಡೆಗೊಳಿಸಿ. ಹಿಂಸೆಯಿಂದ ಏನನ್ನು ಸಾಧಿಸಲಾಗುವುದಿಲ್ಲ ಎಂದು ನಮ್ಮ ಸರ್ಕಾರ ನಂಬಿದೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಉಗ್ರರನ್ನುದ್ದೇಶಿಸಿ ಹೇಳಿದ್ದಾರೆ. 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ

ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯದಲ್ಲಿ ಚೇತರಿಕೆ: ಮಹಿಳೆಗೆ ಒತ್ತಡ, ದೂರು

ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿಕೆ

ಮುಂದಿನ ಸುದ್ದಿ
Show comments