ಲವ್ ಜಿಹಾದ್ ಕುರಿತು ಗಂಭೀರವಾದ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕ ಮತ್ತು ಶಾಸಕ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೊಬ್ಬ ಫೈರ್ಭ್ರ್ಯಾಂಡ್ ನಾಯಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಬೆಂಬಲ ಲಭಿಸಿದೆ.
ಶಿವಸೇನಾದ ಮುಖವಾಣಿ ಸಾಮ್ನಾದ ಸಂಪಾದಕೀಯ ವಿಭಾಗದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ "ಹಿಂದು ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಮದುವೆ ಮಾಡಿಕೊಂಡು ನಂತರ ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತದೆ ಎಂದಿದ್ದಾರೆ.
ಯೋಗಿ ಆದಿತ್ಯನಾಥ್ರ ಇತ್ತೀಚಿನ ಹೇಳಿಕೆ ಮತ್ತು ಈ ವಿಷಯದಲ್ಲಿ ಆರ್ಎಸ್ಎಸ್ ನಾಯಕ ಮೋಹನ್ ಭಾಗ್ವತ್ ಅವರ ದೃಷ್ಟಿಕೋನವನ್ನು ಅನುಮೋದಿಸಿರುವ ಠಾಕ್ರೆ" ಲವ್ ಜಿಹಾದ್ ಹಿಂದು ಸಂಸ್ಕೃತಿಯನ್ನು ನಾಶಪಡಿಸಲು ಕೈಗೊಂಡಿರುವ ಅಂತರಾಷ್ಟ್ರೀಯ ಪಿತೂರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
1 ಹಿಂದು ಹುಡುಗಿಯನ್ನು ಮತಾಂತರಿಸಿದರೆ, ಪ್ರತಿಯಾಗಿ 100 ಮುಸ್ಲಿಂ ಯುವತಿಯರ ಧರ್ಮ ಪರಿವರ್ತನೆ ಮಾಡುತ್ತೇವೆ ಎಂದು ಯೋಗಿ ಆದಿತ್ಯನಾಥ್ ಹೇಳುತ್ತಿದ್ದ ದಿನಾಂಕವಿಲ್ಲದ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.