ರಾಷ್ಟ್ರಗೀತೆಗೆ ಅಪಮಾನ ಮಾಡಿದ ಇಬ್ಬರು ಪತ್ರಕರ್ತರನ್ನು ಹೊರಗಟ್ಟಿದ ಸೇನಾಧಿಕಾರಿ

Webdunia
ಬುಧವಾರ, 25 ಮೇ 2016 (15:47 IST)
ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಎದ್ದು ನಿಂತು ಗೌರವ ತೋರದ ಇಬ್ಬರು ಪತ್ರಕರ್ತರನ್ನು ಸಮಾರಂಭದಿಂದ ಹೊರಹೊಗುವಂತೆ ಸೇನಾಧಿಕಾರಿ ಆದೇಶಿಸಿದ ಘಟನೆ ವರದಿಯಾಗಿದೆ.
 
ಜಮ್ಮು ಕಾಶ್ಮಿರದ ಲೈಟ್ ಇನ್‌ಫಾಂಟ್ರಿ ರೆಜಿಮೆಂಟ್‌ನ ಪಾಸಿಂಗ್ ಔಟ್ ಪರೇಡ್‌ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಕಂದಾಯ ಸಚಿವ ಮತ್ತು ಪಿಡಿಪಿ ಹಿರಿಯ ನಾಯಕ ಸಯ್ಯದ್ ಬಶ್ರತ್ ಅಹ್ಮದ್ ಅವರ ಮುಂದೆ ಇಬ್ಬರು ಪತ್ರಕರ್ತರು ರಾಷ್ಟ್ರಗೀತೆಗೆ ಅಗೌರವ ತೋರಿದ ಘಟನೆ ನಡೆದಿದೆ. 
 
ಸಮಾರಂಭದ ಕುರಿತು ಮಾಹಿತಿ ಸಂಗ್ರಹಿಸುವಂತೆ ಸೇನೆ ಕೋರಿತ್ತು. ಅದರಂತೆ, ರಾಷ್ಟ್ರಗೀತೆ ಹಾಡುವಾಗ ನಾನು ಸಮಾರಂಭದ ವಿವರಗಳನ್ನು ಕಲೆಹಾಕುವಲ್ಲಿ ನಿರತನಾಗಿದ್ದೆ.  ರಾಷ್ಟ್ರಗೀತೆ ಮುಕ್ತಾಯವಾದ ನಂತರ ಸೇನಾಧಿಕಾರಿಯೊಬ್ಬರು ನಮ್ಮ ಬಳಿಗೆ ಬಂದು, ರಾಷ್ಟ್ರಗೀತೆ ಹಾಡುವಾಗ ಯಾಕೆ ಎದ್ದು ನಿಲ್ಲಲಿಲ್ಲ ಎಂದು ಪ್ರಶ್ನಿಸಿ, ನಿಮ್ಮಂತಹ ವ್ಯಕ್ತಿಗಳ ಅಗತ್ಯ ನಮಗಿಲ್ಲ. ಕೂಡಲೇ ಕಾರ್ಯಕ್ರಮದಿಂದ ತೆರಳಿ ಎಂದು ಗುಡುಗಿದ್ದಾಗಿ ಕಾಶ್ಮಿರ್ ರೀಡರ್ ಪತ್ರಿಕೆಯ ವರದಿಗಾರ ಜುನೈದ್ ಬಝಾಝ್ ತಿಳಿಸಿದ್ದಾರೆ. 
 
ಮತ್ತೊಬ್ಬ ಪತ್ರಕರ್ತ ರೈಸಿಂಗ್ ಕಾಶ್ಮಿರ ಪತ್ರಿಕೆಯ ವರದಿಗಾರನಾಗಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದಲ್ಲಿ ಮೊದಲ ಬಾರಿಗೆ ಗೆಲುವಿಗೆ ಪ್ರಧಾನಿ ಮೋದಿಗೆ ಖುಷಿಯೋ ಖುಷಿ

ಜನವರಿ 6 ಕ್ಕೆ ಡಿಕೆ ಶಿವಕುಮಾರ್ ಸಿಎಂ: ಇಕ್ಬಾಲ್ ಹುಸೇನ್ ಮಾತಿಗೆ ಡಿಕೆಶಿ ಹೇಳಿದ್ದೇನು

ತಿರುವನಂತಪುರಂನಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು

ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ: ವಿಜಯೇಂದ್ರ

ಡಿಕೆ ಶಿವಕುಮಾರ್ ಸಿಎಂ ಆಗುವ ದಿನಾಂಕ ಫಿಕ್ಸ್: ಸ್ಪೋಟಕ ಹೇಳಿಕೆ ನೀಡಿದ ಆಪ್ತ ಶಾಸಕ

ಮುಂದಿನ ಸುದ್ದಿ
Show comments