Webdunia - Bharat's app for daily news and videos

Install App

ಶಬರಿಮಲೈ ದೇಗುಲದ ಧ್ವಜಸ್ತಂಬಕ್ಕೇ ರಾಸಾಯನಿಕ ಸುರಿದ ದುಷ್ಕರ್ಮಿಗಳು

Webdunia
ಸೋಮವಾರ, 26 ಜೂನ್ 2017 (10:36 IST)
ಶಬರಿಮಲೈ: ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ದೇವಾಲಯದ ಚಿನ್ನ ಹೊದಿಸಿದ್ದ ಧ್ವಜಸ್ತಂಬಕ್ಕೆ ದುಷ್ಕರ್ಮಿಗಳು ರಾಸಾಯನಿಕ ಸುರಿದು ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.

 
ಧ್ವಜಸ್ತಂಬಕ್ಕೆ ಇತ್ತೀಚೆಗಷ್ಟೇ ಆಂಧ್ರಪ್ರದೇಶ ಮೂಲದ ಉದ್ಯಮಿಗಳ ಕುಟುಂಬವೊಂದು 3.5 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ಹೊದಿಕೆ ಕೊಡುಗೆಯಾಗಿ ನೀಡಿದ್ದರು. ಭಾನುವಾರವಷ್ಟೇ ಧ್ವಜದ ಪ್ರತಿಷ್ಠಾ ವಿಧಿ ನೆರವೇರಿತ್ತು.

ಆದರೆ ಮಧ್ಯಾಹ್ನ ಪೂಜಾ ಕಾರ್ಯಗಳೆಲ್ಲಾ ಮುಗಿಸಿ ಅರ್ಚಕರು ಹೋದ ಮೇಲೆ ದುಷ್ಕರ್ಮಿಗಳು ಧ್ವಜ ಸ್ತಂಬದ ಬುಡಕ್ಕೆ ಪಾದರಸ ಸುರಿದಿದ್ದಾರೆ. ಇದು ಸಿಸಿಟಿವಿಯಲ್ಲಿ ದಾಖಲಾಗಿದೆ. ಪಾದರಸ ಸುರಿದಿದ್ದರಿಂದ ಧ್ವಜ ಸ್ತಂಬದ ಬುಡ ಸುಟ್ಟಂತಾಗಿದೆ.

ಇದೀಗ ಸಿಸಿಟಿವಿ ದೃಶ್ಯಾವಳಿಗಳ ಜಾಡು ಹಿಡಿದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಚಿನ್ನದ ಹೊದಿಕೆ ದಾನ ಮಾಡಿದ ಉದ್ಯಮಿಯ ಕುಟುಂಬದ ಮೇಲಿನ ವೈಷಮ್ಯದಿಂದಾಗಿ ದುಷ್ಕರ್ಮಿಗಳು ಈ ಕೃತ್ಯವೆಸಗಿರಬಹುದೆಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments