Webdunia - Bharat's app for daily news and videos

Install App

ಬೆಚ್ಚಿ ಬೀಳಿಸುವ ತ್ರಿವಳಿ ಕೊಲೆ

Webdunia
ಸೋಮವಾರ, 6 ಜೂನ್ 2016 (10:42 IST)
ರಾಷ್ಟ್ರ ರಾಜಧಾನಿಯ ದೆಹಲಿಯ ಬ್ರಹ್ಮಪುರಿ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವಂತ ತ್ರಿವಳಿ ಕೊಲೆ ನಡೆದಿದ್ದು 50 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಅತ್ಯಂತ ಕ್ರೂರ ಅಂತ್ಯವನ್ನು ಕಂಡಿದ್ದಾರೆ. 
 
ಶನಿವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು, ಮೃತರನ್ನು 50 ವರ್ಷದ ಸಾಯಿರಾ ಮತ್ತು ಆಕೆಯ ಮಕ್ಕಳಾದ 19 ವರ್ಷದ ಮೆಹರುನ್ನೀಯಾ ಮತ್ತು 9 ವರ್ಷದ ಶಬನಮ್ ಎಂದು ಗುರುತಿಸಲಾಗಿದೆ. ಹೊರಗನಿಂದ ಲಾಕ್ ಆಗಿದ್ದ ಮನೆಯ ಒಳಗಿನಿಂದ ಅಸಹನೀಯ ದುರ್ನಾತ ಬರುತ್ತಿರುವ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಾಗಿಲು ಒಡೆದು ಒಳ ಹೋದ ಪೊಲೀಸರಿಗೆ ಮೂರು ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. 
 
ಮೂವರ ದೇಹದ ತುಂಬ ಗಾಯದ ಗುರುತುಗಳಿದ್ದು, ಹರಿತ ಆಯುಧದಿಂದ ತಾಯಿ ಸಾಯಿರಾ ಕತ್ತು ಸೀಳಿ ಕೊಲೆಗೈಯ್ಯಲಾಗಿದೆ. ಮೆಹರುನ್ನೀಸಾಳನ್ನು ಬೆಡ್ ರೂಮ್‌ನಲ್ಲಿ ಬೀಭತ್ಸವಾಗಿ ಕೊಲೆಗೈದರೆ, ಪುಟ್ಟ ಹುಡುಗಿ ಶಬನಮ್ ದೇಹ ಬಾತ್ ರೂಮ್‌ನಲ್ಲಿ ಕಂಡು ಬಂದಿದೆ. ಸಾಯಿರಾ ದೇಹವನ್ನು ಟೇರೆಸ್ ಕಡೆ ಎಳೆದೊಯ್ಯಲು ಪ್ರಯತ್ನಿಸಿ ಮೆಟ್ಟಿಲುಗಳ ಮೇಲೆ ಬಿಡಲಾಗಿದೆ. 
 
ಮೂರು ದಿನಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 
 
ಮನೆ ಅವ್ಯವಸ್ಥಿತವಾಗಿದ್ದು ದರೋಡೆ ಅಥವಾ ಬಲಿಪಶುಗಳ ಮತ್ತು ಕೊಲೆಗಾರರ ನಡುವೆ ಮಾರಾಮಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
 
ಸಾಯಿರಾ ಪತಿ ಮುನ್ನಾ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ಆತನಿಗೆ ಎರಡನೆಯ ಪತ್ನಿ ಸಹ ಇದ್ದು ಎರಡು ಕುಟುಂಬಗಳ ಮಧ್ಯೆ ಇದ್ದ ಆಸ್ತಿ ವಿವಾದ ಘಟನೆಗೆ ಕಾರಣವಾಗಿರಬಹುದೆಂದು ಹೇಳಲಾಗುತ್ತದೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. 
 
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಭಿನ್ನರ ಬಗ್ಗೆ ಬಿಎಸ್ ಯಡಿಯೂರಪ್ಪ ಸ್ಪೋಟಕ ಹೇಳಿಕೆ

ಇದು ಸೇವೆಗಾಗಿ ಬಂದ ಕಾಂಗ್ರೆಸ್ ಅಲ್ಲ, ವ್ಯಾಪಾರಕ್ಕಾಗಿ ಬಂದಿದ್ದು: ಛಲವಾದಿ ನಾರಾಯಣಸ್ವಾಮಿ

ಸಾಲಗಾರನ ಮಗಳನ್ನು ಕರೆದೊಯ್ದ ಪ್ರಕರಣ: ಆರೋಪಿ ಅರೆಸ್ಟ್‌

ನನ್ನ ಶೂ ನೆಕ್ಕಲು ಸಹ ಅರ್ಹನಲ್ಲ: ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟ ಇಂಡಿಗೋ ಸಿಬ್ಬಂದಿ

ಜಮ್ಮುನಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ಏರ್‌ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌: ಕಾರಣ ನಿಗೂಢ

ಮುಂದಿನ ಸುದ್ದಿ
Show comments